ನೆನಪುಗಳ ಕೇಳದಿರು
ಬುತ್ತಿ ಕಸಿಯದಿರು
ಮನಸ್ಸಿನ ಪ್ರತಿರಂಧ್ರದಿಂದ ಹೆಕ್ಕಲಾರೆ !
ಭಾವನೆಗಳ ಹೊಲಿಗೆ ಬಿಚ್ಚಲೊಲ್ಲೆ !!
ಜೀವನದಿ ಅಮೂಲ್ಯ ಉಡುಗೊರೆಗಳವು !
ಹೋಗುವುದಾದರೆ ನೀ ಹೋಗು......
ಎಂದಿಗೂ.. ನಾ ಏಕಾಂಗಿ.
ಕೇಳಿದ್ದರ, ಬಯಸಿದ್ದರ
ಅರಿವಿಲ್ಲ, ಪರಿವಿಲ್ಲ
ನಿನ್ನ ನೋಯಿಸುವುದೆಂದು.
ಆದರೆ ಕ್ಷಮಿಸು......
ನೆನಪಲ್ಲೇ ಬುತ್ತಿ ಇಟ್ಟು ಸಾಗುತ್ತೇನೆ
ಕಣ್ಣೀರಿನ ಸಮುದ್ರವಿದೆ
ದಿನಾ ಮುಳುಗೇಳುವ ಪರಿಯಿದೆ.
ನಿನ್ನಂತ ಆಕಾಶದೀಪದಲಿ
ಚೆಲ್ಲುವ ಬೆಳಕಲ್ಲಿ ಮಿನುಗುತ್ತೇನೆ
ಇಂದಿಗೆ ನಿಲ್ಲಿಸು ನಿನ್ನ ಬೆಳಕನ್ನ
ನೆನಪಿನ ಬೆಳಕಲ್ಲಿ ಬದುಕು ಸವೆವೆ.
ನೋವುಗಳ ಬೇಯಿಸಿ ಕೊಡಲಾರೆ!
ಅದು ನನಗಿರಲಿ.
ನನ್ನ ನಲಿವೂ.... ನಿನಗೆ ಬರಲಿ
ಸಾಧ್ಯವಾಗುವುದಾದರೆ.....
ನಿನ್ನೆಲ್ಲಾ ನೋವುಗಳು ನನಗಿರಲಿ.
ಚಂದಿರೆ ನಾನು !.....
ನೋವುಗಳ ಬಚ್ಚಿಟ್ಟು ನಗುವುದು ಕರಗತ.
ಸೋಗೆಯಲಿ ಮಲಗಿಸಿ ಬಿಡು
ಗಾಢನಿದ್ದೆಯಲಿ ನೆಮ್ಮದಿಯ ನಿಟ್ಟುಸಿರು !
ಬೂದಿಯಲಿ ಗುಲಾಬಿ ಎಲೆಯನ್ನಾದರೂ ಸೇರಿಸು
ಪಂಚಭೂತಗಳಲ್ಲಿ ಸ್ನೇಹ ಬಯಸುತ್ತೇನೆ.
ನೀ...ಹೋಗು ನನ್ನ ಬಿಟ್ಟು
ಮತ್ತೆಂದೂ ನನ್ನ ಪಯಣದಲಿ ಇಣುಕಬೇಡ.
ನನ್ನದೊಂದು ವಿನಮ್ರ ಬೇಡಿಕೆ...
ಷರಕ್ಕೆ ಷರವಾಗ ಬಯಸುತ್ತೇನೆ...
" ನನ್ನಿಲ್ಲಿಯ ಪಯಣ ಮುಗಿದ ಮೇಲೆ.. "
ಬುತ್ತಿ ಕಸಿಯದಿರು
ಮನಸ್ಸಿನ ಪ್ರತಿರಂಧ್ರದಿಂದ ಹೆಕ್ಕಲಾರೆ !
ಭಾವನೆಗಳ ಹೊಲಿಗೆ ಬಿಚ್ಚಲೊಲ್ಲೆ !!
ಜೀವನದಿ ಅಮೂಲ್ಯ ಉಡುಗೊರೆಗಳವು !
ಹೋಗುವುದಾದರೆ ನೀ ಹೋಗು......
ಎಂದಿಗೂ.. ನಾ ಏಕಾಂಗಿ.
ಕೇಳಿದ್ದರ, ಬಯಸಿದ್ದರ
ಅರಿವಿಲ್ಲ, ಪರಿವಿಲ್ಲ
ನಿನ್ನ ನೋಯಿಸುವುದೆಂದು.
ಆದರೆ ಕ್ಷಮಿಸು......
ನೆನಪಲ್ಲೇ ಬುತ್ತಿ ಇಟ್ಟು ಸಾಗುತ್ತೇನೆ
ಕಣ್ಣೀರಿನ ಸಮುದ್ರವಿದೆ
ದಿನಾ ಮುಳುಗೇಳುವ ಪರಿಯಿದೆ.
ನಿನ್ನಂತ ಆಕಾಶದೀಪದಲಿ
ಚೆಲ್ಲುವ ಬೆಳಕಲ್ಲಿ ಮಿನುಗುತ್ತೇನೆ
ಇಂದಿಗೆ ನಿಲ್ಲಿಸು ನಿನ್ನ ಬೆಳಕನ್ನ
ನೆನಪಿನ ಬೆಳಕಲ್ಲಿ ಬದುಕು ಸವೆವೆ.
ನೋವುಗಳ ಬೇಯಿಸಿ ಕೊಡಲಾರೆ!
ಅದು ನನಗಿರಲಿ.
ನನ್ನ ನಲಿವೂ.... ನಿನಗೆ ಬರಲಿ
ಸಾಧ್ಯವಾಗುವುದಾದರೆ.....
ನಿನ್ನೆಲ್ಲಾ ನೋವುಗಳು ನನಗಿರಲಿ.
ಚಂದಿರೆ ನಾನು !.....
ನೋವುಗಳ ಬಚ್ಚಿಟ್ಟು ನಗುವುದು ಕರಗತ.
ಸೋಗೆಯಲಿ ಮಲಗಿಸಿ ಬಿಡು
ಗಾಢನಿದ್ದೆಯಲಿ ನೆಮ್ಮದಿಯ ನಿಟ್ಟುಸಿರು !
ಬೂದಿಯಲಿ ಗುಲಾಬಿ ಎಲೆಯನ್ನಾದರೂ ಸೇರಿಸು
ಪಂಚಭೂತಗಳಲ್ಲಿ ಸ್ನೇಹ ಬಯಸುತ್ತೇನೆ.
ನೀ...ಹೋಗು ನನ್ನ ಬಿಟ್ಟು
ಮತ್ತೆಂದೂ ನನ್ನ ಪಯಣದಲಿ ಇಣುಕಬೇಡ.
ನನ್ನದೊಂದು ವಿನಮ್ರ ಬೇಡಿಕೆ...
ಷರಕ್ಕೆ ಷರವಾಗ ಬಯಸುತ್ತೇನೆ...
" ನನ್ನಿಲ್ಲಿಯ ಪಯಣ ಮುಗಿದ ಮೇಲೆ.. "

