ಕಾಸರಕೂಸು

ಏಕಾಂತೆಯ ತರಂಗಗಳ ಅರಸಿ..

ಸೋಮವಾರ, ಜೂನ್ 8, 2020

ಆಶಯ



ನನ್ನದೆಂದ ಕವಿತೆಗೆ ಏಕಾಂತದ
ಹಮ್ಮು -ಬಿಮ್ಮು
ಕವಿತೆ ಆಶಯ ಮೂಕರಾಗ
ಕವಿತೆ ಭಾವವೊ.. ಭಾವೋದ್ವೇಗವೊ ..
ಕಲ್ಲ ಮನಸ್ಸಿನ ಪ್ರತಿಬಿಂಬದ ಛಾಪೊ..
ಬೇಸಿಗೆಯ ಕಡು ಬಿಸಿಲೊ..
ನೋವಿನ ಕೂಪವೊ ..
ಬೇಸರದ ಸೂರ್ಯನೆತ್ತಿ ರೂಪವೊ ..
ಪ್ರಶಂಸೆಯ ದಿಕ್ಕೊ ...
ಬಿಡಿಸಲಾಗದ ಕಗ್ಗಂಟು
ಪ್ರೀತಿಯ ಕುಣಿಕೆಯೊ..
ಸ್ಫೂರ್ತಿಯೊ .. ಆಸರೆಯೊ...
ಸಾಂತ್ವನವೊ ...
ಜ್ಞಾನದ ಜಾಣ ಕುರುಡೊ...
ಬದುಕಿನ ಬರಸಿಡಿಲೊ ...
ಒಂಟಿತನದ ಬುತ್ತಿಯೊ..
ನಂದಾದೀಪವೊ... ಅರಿವಿಲ್ಲ
ಅಷ್ಟಾದರೂ.. ಕವಿತೆ ಸ್ಪಂದಿಸುವ
ದರ್ಜೆ ವುಳ್ಳದ್ದಾಗಿದ್ದರೆ ...??
ಕಾಡುವ.. ಹತ್ತಾರು ಯಕ್ಷ ಪ್ರಶ್ನೆ.


ಬಳ್ಳಿ




ಮಣ್ಣಿನ ಕಣ್ಣೊಳಗೆ
ಹುದುಗಿಟ್ಟ ಮೊಳಕೆಯು
ಬಳ್ಳಿಯಾಗಿ ಬೆಳೆದು
ಬಾಂದಳದಲ್ಲಿ ಮೊಗ್ಗಾಗಿ
ಭುವಿಯಲ್ಲಿ ಹೂವಾಗಿ
ಬಾವುಲಿ ಕಾಟಕ್ಕೆ ಕಪ್ಪಾಗಿ
ಪಟ ಪಟ ರೆಕ್ಕೆ ಬಡಿದು
ತನ್ನೊಳಗೆ ಒದ್ದಾಡಿ
ಬಡಿದಾಡಿ, ಗುದ್ದಾಡಿ
ನಿಲ್ಲಲು ತಿಣುಕಾಡಿ
ಅಸುನೀಗುತಿಹುದು

* * * * * * * *
 ಓ.. ವಿಧಿಯೇ...
ಏಕೆ.. ಇಷ್ಟೊಂದು ಘೋರ ನೀನು..?
ಒಲವನ್ನು ಹೊತ್ತು
ನೋವನ್ನು ಬಿತ್ತಿ.. ಸೆಳೆದುಬಿಟ್ಟೆಯಾ..
ಸ್ವಲ್ಪವಾದರೂ ಕರುಣೆ
ಇಲ್ಲದಾಯಿತೇ....
ಪ್ರೀತಿಸುವ ಜೀವಗಳ
ಅಗಲಿಸುವುದರಲ್ಲೇನಿದೆ..
ನಿನಗೆ ಆಹ್ಲಾದ..??
ಕಂದಮ್ಮ ಕಣ್ಣು ಮಿನುಕಿಸುವ
ಮೊದಲೇ ಸೃಷ್ಟಿಕರ್ತನ
ಮರಣ ಪಲ್ಲಕ್ಕಿಯಲ್ಲಿ ಮಲಗಿಸಿ ಬಿಟ್ಟೆಯಲ್ಲ
ಕಟ್ಟಿದ ಕನಸಿನ ಗೋಪುರದ
ಅಡಿಪಾಯ ಕೆಡವಿ ಬಿಟ್ಟೆಯಲ್ಲ
ಸಹಿಸುವ ಶಕ್ತಿಯಾದರೂ.. ಹೇಗೆ..?
ನೀನೇ ಹೇಳು..ಓ ಶೂರ ವಿಧಿಯೇ..
ನಿನಗಿಲ್ಲವೇ..  ಅಂತಃಕರಣ?? ಓ.. ವಿಧಿಯೇ...
ಓ... ಘನಘೋರ... ನೀಚ.. ಕ್ರೂರ ವಿಧಿಯೇ..
         

ನಾನು ಮಗು ನಿನ್ನ ಮಗು ನಿನ್ನ ಕುಂಬೆ ರೆಂಬೆ ಹಬ್ಬಿ ಮಗು ನಿನ್ನ ನೆನೆದು  ಅಳುವ ಮಗು ನಿನ್ನ ಅಪ್ಪಿ ನಗುವ ಮಗು ನಿನ್ನ ನೋಡಿ ಕುಣಿವ ಮಗು ನಿನ್ನ ಹಸಿರ ಬನದಿ ಬೆಳೆವ ಉಸಿರ ಮ...