ಕಾಸರಕೂಸು

ಏಕಾಂತೆಯ ತರಂಗಗಳ ಅರಸಿ..

ಸೋಮವಾರ, ಜೂನ್ 29, 2020

ಮನ -ಮಸಣದಲ್ಲಿ ಶಾಲೆ


ಮನ -ಮಸಣದಲ್ಲಿ ಶಾಲೆ


ಮನ- ಮಸಣ ಅಕ್ಷರಗಳ ವ್ಯತ್ಯಾಸದಲ್ಲಿ
ಹುಟ್ಟುವ ಹಳೆಯದಾದರೂ  ಹೊಸ ನಂಟು
ಮಕ್ಕಳಿಲ್ಲದ ಶಾಲೆ ಮಸಣದ ಭಾಸ
ಮಸಣ ಕಾಯುವವನು
ಆಲಸಿ ಆಚಾರ್ಯ
ಮೌನಕ್ಕೂ ಮೌನ ಕಲಿಸುವ ನಿಶ್ಯಬ್ದತೆ
ನಿಗೂಢ ಶಬ್ದದೊಂದಿಗೆ ಆಗಾಗ್ಗೆ ಬಂದು
ಏನಾದರೂ ಅರ್ಥ ಕೊಟ್ಟು ಹೋಗ್ವ ತಂಗಾಳಿ
ಮನಕ್ಕೆ ಬಡಿದಿದ್ದ ಪೈಶಾಚಿಕತೆ ಶಾಲೆಯ
ತುಂಬೆಲ್ಲಾ ನಲಿದಾಡುತ್ತಿದೆ
ಮಕ್ಕಳ ಆರ್ಭಟಕ್ಕೆ ಗುಡುಗಿದರು ಅಲುಗದ ಶಾಲೆ
ಗುಂಡುಸೂಜಿ ನೆಲಅಪ್ಪಿದರು
ಕರಾಳ ಅಳುವು
ನೀರಿದ್ದರು ಜೀವ ಕಳೆದುಕೊಂಡು
ತೊಟ್ಟಿಕ್ಕುತ್ತಿರುವ ನೀರಕೊಳವೆಗಳು
ಬೋರ್ಡು , ಕಾರ್ಡು , ಬೆಂಚುಗಳ
ಮಾಲೀಕತ್ವ ವಹಿಸಿರುವ ಇಲಿರಾಯ
ತನ್ನದೆ ಕಾರುಬಾರು ನಡೆಸಿದ್ದಾನೆ
ಹೂ-ಗಿಡ , ತರಗೆಲೆಗಳು ಮಕ್ಕಳ
ಆರೈಕೆ ಅರಸಿ ಬರುವಿಕೆಗಾಗಿ ಬಾಗಿ
ಸ್ವಗತ ಕೋರುತ್ತ ಭೂತಬಂಗಲೆಯ
ಸೇವಕರಾಗಿ ನೇಮಕಗೊಂಡಿವೆ
ಆಟದ ಮೈದಾನಗಳು ಮಾನವ ಕೃತ್ಯಕ್ಕೆ
ರಣರಂಗದ ಅವಶೇಷವಾಗಿವೆ
ಇದ್ದಾಗ ತಿಳಿಯದ ಅರಿಯದ ಪ್ರೀತಿ
ಸ್ವಲ್ಪ ಸ್ವಲ್ಪವೇ ಅರಿವಿನ ಗುಳಿಗೆ ನುಂಗಿಸುತ್ತಿದೆ
ಕಾಡುವ ಪಾಪಪ್ರಜ್ಞೆಯಲ್ಲಿ ಮುಳುಗೇಳುವ ಅಜ್ಞಾತವಾಸ,

ಬುಧವಾರ, ಜೂನ್ 24, 2020

ಚಪ್ಪಲಿಗಳು

ಓ...ಬಣ್ಣ ಬಣ್ಣದ ಚಪ್ಪಲಿಗಳೇ
ನಿಲ್ಲಿರಿ ಸ್ವಲ್ಪ
ಮನಸ್ಸಿಲ್ಲವೆ... ದಣಿವಾಗುವುದಿಲ್ಲವೆ...?
ಯಜಮಾನನ ಅಣತಿಗೆ
ಎಲ್ಲೆಂದರಲ್ಲಿ ಹೋಗುತ್ತಿರಲ್ಲ...?
ನಿಮ್ಮ ಮೇಲೆ ಕಾಲೂರುವ
ಅರ್ಹತೆ ಇದೆಯೇ ನನಗೆ ....,
ಯೋಚಿಸುವುದಿಲ್ಲವೆ...ವಿನಯತೆಯೆ.....
ತುಳಿದರು...ಹೊಲೆದರು
ಮಣ್ಣಲ್ಲೇ ಹೂತರು ಬೇಸರವಿಲ್ಲ
ಸದಾ ಸೇವೆಗೆ ನಿಮ್ಮ ಹಾಜರಿ
ಒಂದು ಜೀವ ತೆತ್ತರೆ
ಇನ್ನೊಂದು ಒಂಟಿಯಾಗಿ ರೋಸುವುದು
ಪಾದಗಳ ಪಾಲಕ
ಕಿಂಚಿತ್ತೂ ಬೆಲೆಯಿಲ್ಲ
ಎಂದೂ ಹೊಸ್ತಿಲ ಹೊರಗೆ
ಸ್ವಾರ್ಥ ಜಗತ್ತಿನ ಅರಸಿಗಳು ನಾನು
ಮಳೆ ಬಿಸಿಲಿಗೆ ಮೈ ನೆನೆಸಿ ಮುಳ್ಳುಗಳೇ
ಮುತ್ತಿಕ್ಕಿದರು ತೋರಿಕೆಯಿಲ್ಲದ ಮೃದುತ್ವ
ಅದು ನನಗಿಲ್ಲವಾಯಿತ್ತಲ್ಲ..?
ಹೇ....ಜೋಡೆ...
ನನ್ನಂತೆ ಜೀವ ತುಂಬಿಕೊ಼ಂಡಿದ್ದರೆ
ನಾನಾಗಿರುತ್ತಿದ್ದೆ ನೀನು
ಚಮ್ಮಾರನ ಛಾವಣಿಯ ಅನ್ನದಾತನ
ವಿಶಾಲ ಮನಸ್ಥಿತಿ ನನಗಿಲ್ಲವಲ್ಲ
ಬೆಡಗು -ವಯ್ಯಾರಕ್ಕೆ
ಧರಿಸಿದರು ಸಮಾನತೆ ಬಾಳ್ವೆ
ಸ್ವಾರ್ಥ ಮನಸ್ಸುಗಳಿಗಾಗಿ ಸವೆವ
ನಿಷ್ಕಲ್ಮಶ ಔದಾರ್ಯ
ನಿನ್ನ ಮೆಟ್ಟುವ ನನ್ನಲ್ಲಿ ನಾ ಕಾಣೆ
ಯಾಕೆಂದರೆ ನನ್ನಲ್ಲಿ , ನನ್ನಲ್ಲಿರುವುದು
ಮನುಜರ ಗುಣ.

ಗುರುವಾರ, ಜೂನ್ 18, 2020

ಮನ -ಮನಗಳ ಮಾತು




ಮನಸ್ಸು -1 : ಏನಿದೆ  ಜೀವನದಲ್ಲಿ ......?
ಮನಸ್ಸು -2 : ಏನಿಲ್ಲಾ...??ಜೀವನದಲ್ಲಿ...?

ಮನಸ್ಸು -1 : ನಿನ್ನ ಬಿಟ್ಟು ಉಳಿದೆಲ್ಲ
ಮನಸ್ಸು -2 : ಮೌನ

ಮನಸ್ಸು -1 : ಏನಿದ್ದರೇನು..?ನೀನಿಲ್ಲದೆ
                   ಶೂನ್ಯ
ಮನಸ್ಸು -2 : ಆಲಿಸಿ , ಆಲೋಚಿಸುವ
                    ಶಕ್ತಿ ಇದೆಯೇ......

ಮನಸ್ಸು -1 : ಇದ್ದರು..ಆಲಿಸುತ್ತಿಲ್ಲ
ಮನಸ್ಸು -2 : ನಿನ್ನ ಎಂಬುದ ಬಿಟ್ಟು ನಿನಗಾಗಿ
                      ಎಂಬುದನ್ನು ಕಿವಿಗೊಡು

ಮನಸ್ಸು -1 :  ಸಾಧ್ಯವೇ.....?
ಮನಸ್ಸು -2 : ಪ್ರೀತಿಸುವ ,ದ್ವೇಷಿಸುವ
                   ಮನಸ್ಸಿಲ್ಲ

ಮನಸ್ಸು -1:  ನೋವಲ್ಲೆ ಕೊನೆಯುಸಿರು
ಮನಸ್ಸು -2 :  ತನ್ನಂತೆ ತಟಸ್ಥ.

ಸೋಮವಾರ, ಜೂನ್ 8, 2020

ಆಶಯ



ನನ್ನದೆಂದ ಕವಿತೆಗೆ ಏಕಾಂತದ
ಹಮ್ಮು -ಬಿಮ್ಮು
ಕವಿತೆ ಆಶಯ ಮೂಕರಾಗ
ಕವಿತೆ ಭಾವವೊ.. ಭಾವೋದ್ವೇಗವೊ ..
ಕಲ್ಲ ಮನಸ್ಸಿನ ಪ್ರತಿಬಿಂಬದ ಛಾಪೊ..
ಬೇಸಿಗೆಯ ಕಡು ಬಿಸಿಲೊ..
ನೋವಿನ ಕೂಪವೊ ..
ಬೇಸರದ ಸೂರ್ಯನೆತ್ತಿ ರೂಪವೊ ..
ಪ್ರಶಂಸೆಯ ದಿಕ್ಕೊ ...
ಬಿಡಿಸಲಾಗದ ಕಗ್ಗಂಟು
ಪ್ರೀತಿಯ ಕುಣಿಕೆಯೊ..
ಸ್ಫೂರ್ತಿಯೊ .. ಆಸರೆಯೊ...
ಸಾಂತ್ವನವೊ ...
ಜ್ಞಾನದ ಜಾಣ ಕುರುಡೊ...
ಬದುಕಿನ ಬರಸಿಡಿಲೊ ...
ಒಂಟಿತನದ ಬುತ್ತಿಯೊ..
ನಂದಾದೀಪವೊ... ಅರಿವಿಲ್ಲ
ಅಷ್ಟಾದರೂ.. ಕವಿತೆ ಸ್ಪಂದಿಸುವ
ದರ್ಜೆ ವುಳ್ಳದ್ದಾಗಿದ್ದರೆ ...??
ಕಾಡುವ.. ಹತ್ತಾರು ಯಕ್ಷ ಪ್ರಶ್ನೆ.


ಬಳ್ಳಿ




ಮಣ್ಣಿನ ಕಣ್ಣೊಳಗೆ
ಹುದುಗಿಟ್ಟ ಮೊಳಕೆಯು
ಬಳ್ಳಿಯಾಗಿ ಬೆಳೆದು
ಬಾಂದಳದಲ್ಲಿ ಮೊಗ್ಗಾಗಿ
ಭುವಿಯಲ್ಲಿ ಹೂವಾಗಿ
ಬಾವುಲಿ ಕಾಟಕ್ಕೆ ಕಪ್ಪಾಗಿ
ಪಟ ಪಟ ರೆಕ್ಕೆ ಬಡಿದು
ತನ್ನೊಳಗೆ ಒದ್ದಾಡಿ
ಬಡಿದಾಡಿ, ಗುದ್ದಾಡಿ
ನಿಲ್ಲಲು ತಿಣುಕಾಡಿ
ಅಸುನೀಗುತಿಹುದು

* * * * * * * *
 ಓ.. ವಿಧಿಯೇ...
ಏಕೆ.. ಇಷ್ಟೊಂದು ಘೋರ ನೀನು..?
ಒಲವನ್ನು ಹೊತ್ತು
ನೋವನ್ನು ಬಿತ್ತಿ.. ಸೆಳೆದುಬಿಟ್ಟೆಯಾ..
ಸ್ವಲ್ಪವಾದರೂ ಕರುಣೆ
ಇಲ್ಲದಾಯಿತೇ....
ಪ್ರೀತಿಸುವ ಜೀವಗಳ
ಅಗಲಿಸುವುದರಲ್ಲೇನಿದೆ..
ನಿನಗೆ ಆಹ್ಲಾದ..??
ಕಂದಮ್ಮ ಕಣ್ಣು ಮಿನುಕಿಸುವ
ಮೊದಲೇ ಸೃಷ್ಟಿಕರ್ತನ
ಮರಣ ಪಲ್ಲಕ್ಕಿಯಲ್ಲಿ ಮಲಗಿಸಿ ಬಿಟ್ಟೆಯಲ್ಲ
ಕಟ್ಟಿದ ಕನಸಿನ ಗೋಪುರದ
ಅಡಿಪಾಯ ಕೆಡವಿ ಬಿಟ್ಟೆಯಲ್ಲ
ಸಹಿಸುವ ಶಕ್ತಿಯಾದರೂ.. ಹೇಗೆ..?
ನೀನೇ ಹೇಳು..ಓ ಶೂರ ವಿಧಿಯೇ..
ನಿನಗಿಲ್ಲವೇ..  ಅಂತಃಕರಣ?? ಓ.. ವಿಧಿಯೇ...
ಓ... ಘನಘೋರ... ನೀಚ.. ಕ್ರೂರ ವಿಧಿಯೇ..
         

ನಾನು ಮಗು ನಿನ್ನ ಮಗು ನಿನ್ನ ಕುಂಬೆ ರೆಂಬೆ ಹಬ್ಬಿ ಮಗು ನಿನ್ನ ನೆನೆದು  ಅಳುವ ಮಗು ನಿನ್ನ ಅಪ್ಪಿ ನಗುವ ಮಗು ನಿನ್ನ ನೋಡಿ ಕುಣಿವ ಮಗು ನಿನ್ನ ಹಸಿರ ಬನದಿ ಬೆಳೆವ ಉಸಿರ ಮ...