ಮನಸ್ಸು ಕನಸ್ಸಿನೊಳಗೊಂದು
ಪುಟ್ಟ ಹಕ್ಕಿ...!!
ಗೂಡು ಕಟ್ಟಿ ನಲುಗುತಿಹುದು
ಕತ್ತಲ್ಲನ್ನೇ ಹೊತ್ತಿದ್ದರು
ಸದಾ ಇಣುಕುತ್ತಿರುತ್ತದೆ
ಅದಕ್ಕೂ.. ಕಣ್ಣು.. ಕಿವಿ..
ಮನಸ್ಸು... ಇದ್ದಿರಬಹುದು!
ಉಸಿರಾಡಲು ಹವಣಿಸುತ್ತಿರುತ್ತದೆ
ನಿರಾಸೆಯ ಗುಳ್ಳೆಗಳನ್ನು ಅಂಟಿಸಿಕೊಂಡು
ಭರವಸೆಯ ಗಂಟು
ಹೊದ್ದು ನಿದ್ರಿಸುತ್ತಿರುತ್ತದೆ
ಒಳ ಇರಲೂ.. ಒಲ್ಲದು
ಹೊರಹೋಗಲು ಕಾಲಿಲ್ಲ
ಅದರ ಖಂಡನೆ ಸಲ್ಲದು
ಸೂರ್ಯ ತೇಜಸ್ಸಿನ ಕಿರಣ ಪ್ರಭೆ
ಪುಟ್ಟ ರಂಧ್ರ ಸೃಷ್ಟಿಸಿ
ಹೊರ ತೇಲಿಸ ಬಹುದೆಂಬ
ಆಶಾಭಾವದ ಕಪ್ಪುಛಾಯೆ
ಎಂದಿಗೋ.. ಮೂಕವೇದನೆಗೆ
ಬಿಡುಗಡೆಯ ಮರೀಚಿಕೆ
ಇಂದಿರಾ..ಚಂದಿರ.. ಆಚಾರ್ಯರಿಂದ.
ಪುಟ್ಟ ಹಕ್ಕಿ...!!
ಗೂಡು ಕಟ್ಟಿ ನಲುಗುತಿಹುದು
ಕತ್ತಲ್ಲನ್ನೇ ಹೊತ್ತಿದ್ದರು
ಸದಾ ಇಣುಕುತ್ತಿರುತ್ತದೆ
ಅದಕ್ಕೂ.. ಕಣ್ಣು.. ಕಿವಿ..
ಮನಸ್ಸು... ಇದ್ದಿರಬಹುದು!
ಉಸಿರಾಡಲು ಹವಣಿಸುತ್ತಿರುತ್ತದೆ
ನಿರಾಸೆಯ ಗುಳ್ಳೆಗಳನ್ನು ಅಂಟಿಸಿಕೊಂಡು
ಭರವಸೆಯ ಗಂಟು
ಹೊದ್ದು ನಿದ್ರಿಸುತ್ತಿರುತ್ತದೆ
ಒಳ ಇರಲೂ.. ಒಲ್ಲದು
ಹೊರಹೋಗಲು ಕಾಲಿಲ್ಲ
ಅದರ ಖಂಡನೆ ಸಲ್ಲದು
ಸೂರ್ಯ ತೇಜಸ್ಸಿನ ಕಿರಣ ಪ್ರಭೆ
ಪುಟ್ಟ ರಂಧ್ರ ಸೃಷ್ಟಿಸಿ
ಹೊರ ತೇಲಿಸ ಬಹುದೆಂಬ
ಆಶಾಭಾವದ ಕಪ್ಪುಛಾಯೆ
ಎಂದಿಗೋ.. ಮೂಕವೇದನೆಗೆ
ಬಿಡುಗಡೆಯ ಮರೀಚಿಕೆ
ಇಂದಿರಾ..ಚಂದಿರ.. ಆಚಾರ್ಯರಿಂದ.



