ನಮ್ಮ ಊರಿನ ಕೆಂಪಿನ ಬಸ್ಸು
ಭೇದಭಾವವನ್ನು ಎಂದೂ ತಿಂದಿಲ್ಲ
ಜೀವನ ವೈರಾಗ್ಯದ ಮುಪ್ಪನುಂಡಿಲ್ಲ
ಕಪ್ಪು-ಬಿಳುಪಿನ ಬಣ್ಣದ ಬೇರನ್ನು ಅಂಟಿಸಿಕೊಂಡಿಲ್ಲ
ಮುಂಭಾಗದ ನೆತ್ತಿ ದುರದುರ ದೃಷ್ಟಿಸುವವರನ್ನು
ಮೌನವಾಗಿ ಸ್ವಾಗತ ಕೋರುತ್ತಾ,,,,,,,,
ಸವಾರ ಪ್ರಜೆಗಳ ಶುಚಿತ್ವಕ್ಕೆ ಕೈಗನ್ನಡಿಯಾಗಿದೆ
ಕಸದ ಬುಟ್ಟಿಯ ವಾಸಿಗರೆಲ್ಲ
ಸೀಟು , ಬೋಟಿನ ಕೆಳಗೆ
ವಾಯುವಿನ ಅಡ್ಡಾಟಕ್ಕಿರುವ ಕಿಟಕಿಗಳು
ಮಳೆರಾಯ ತೊಟ್ಟಿಕ್ಕುತ್ತಿದ್ದರೂ ಮಂಡೆ
ಕೆಡಿಸಿಕೊಳ್ಳುವ ಪರಿವಿಲ್ಲ
ಕಾಲೇಜು ಹೈಕಳ ಜ್ಞಾನ ಲಿಪಿಗಳು
ಶೈಲಿಗಳಲ್ಲಿ ಕೆತ್ತಲ್ಪಟ್ಟಿದ್ದರು ಬೇಸರವಂತು ಕಂಡಿಲ್ಲ
ಸೀಮೆಂಟು ಕಾಂಕ್ರೀಟು ರಂಗವಲ್ಲಿಯ
ತೋಡುಗಳಲ್ಲಿ ಬೀಗುತ್ತಿದ್ದ ರಾಜರಥ
ಸಿಗರೇಟು, ಬೀಡಿ , ಸಾರಾಯಿಗಳ
ಪರಿಮಳಕ್ಕೆ ಜೋತುಬಿದ್ದು
ಯಾವುದೇ ರಥಬೀದಿಯಲ್ಲಿ ಪ್ರಜೆಗಳ
ಅಣತಿಯಂತೆ ನಿಂತುಬಿಡುತ್ತಿತ್ತು
ಸದ್ದು-ಗದ್ದಲಗಳಲ್ಲಿ ಕಲ್ಲುಗಳನ್ನು ಬಾಚಿ
ತಿಂದು ನಜ್ಜುಗುಜ್ಜಾಗಿ ಗಲಗಲ ಸದ್ದುಳ್ಳ
ತಗಡಿನ ಡೋರು ನೇತಾಡುತ್ತಿದ್ದರು
ನನ್ನ ಸಮಯಕ್ಕೆ ಬೆಲೆಯಿತ್ತು ತಲುಪಿಸುತ್ತಿದ್ದ
ಬಸ್ಸಿಂದು ಮಂಗಳಸೂತ್ರ ಕಳೆದುಕೊಂಡವರಂತೆ
ಚಿಂತೆಯ ಅರೆನಿದ್ರೆಯಲ್ಲಿ ಬೇಯುತ್ತಾ ನಿಂತಿದೆ.
