ಕಾಸರಕೂಸು

ಏಕಾಂತೆಯ ತರಂಗಗಳ ಅರಸಿ..

ಶನಿವಾರ, ಜೂನ್ 17, 2023

ಕಾಡುವಿಕೆ

ದಿನಾ ಸಂಜೆಯಾಗುವ ವೇಳೆಗೆ ಮಕ್ಕಳ, ಗಲಾಟೆ, ಕಿರಿಕಿರಿ, ತಲೆನೋವು....
ಅಪ್ಪಾ... ಸಾಕಪ್ಪ, ಮನೆಗೆ ಹೋಗಿ ರೆಸ್ಟ್ ಮಾಡುವ ಅನ್ನಿಸುತ್ತಿದ್ದ ನನಗೆ ಬೇಸಿಗೆ ರಜಾ ದಿನಗಳಲ್ಲಿ,ಆ ಮಕ್ಕಳ ಗಲಾಟೆ, ನನ್ನೊಂದಿಗಿನ ಮಾತು, ಚಾಡಿತನ, ಅವರ ನಗು, ಮುಗ್ದತೆ, ಪಿಸುಗುಟ್ಟುವಿಕೆ, ವಿಧೇಯತೆ, ವಿನಯ, ಗೌರವ, ನನ್ನೊಂದಿಗಿನ ಆತ್ಮೀಯತೆ, ಅವರೊಂದಿಗಿನ ಒಡನಾಟಗಳು ಬಹುವಾಗಿ ಕಾಡುತ್ತಿವೆ.

ಎಷ್ಟಾದರೂ ನನ್ನ ಶಾಲೆಯ ಮಕ್ಕಳು, ನಮ್ಮ ಮಕ್ಕಳು, ದೇವರಂತ ಮುಗ್ಧ ಮಕ್ಕಳು.


Miss you All

ಖುಷಿಯ ಅಮಲೇರಿದ ದಿನ (ಚಾರಣ )

ಬಹುದಿನದ ಆಸೆ, ಕನಸು, ಹಂಬಲ.... ನಾನೂ trekking ಹೋಗಬೇಕೆಂಬುದು. ಆದರದೋ ಕೂಡಿಬಾರದ ದಿನವಾಗಿತ್ತು. ಹಪಾಹಪಿ ತನದ ಪ್ರಯತ್ನವಾಗಿ, ಅಂದಿನ ದಿನ ನಾನು ತಂಡದೊಂದಿಗೆ ಪಾರ್ವತಮ್ಮ ಬೆಟ್ಟಕ್ಕೆ ಖುಷಿ, ಕುತೂಹಲ ದೊಂದಿಗೆ ಚಾರಣ ಹೋದದ್ದು ಕನಸಿನ ಬೀಜಕ್ಕೆ, ಹದಗೊಳಿಸಿದ ತಂಪು ಮಣ್ಣಿನ ಸ್ಪರ್ಶ ದೊರೆತ ಖುಷಿಯಾಯಿತು.

ಪ್ರಕೃತಿಯೊಂದಿಗಿನ ಒಡನಾಟದ ಮುಂದೆ ನಾನೆಂಬುದು ಏನಿಲ್ಲವೆನಿಸಿತು. ಮೋಡ ಕವಿದ ವಾತಾವರಣ, ಹುಡುಕಿದರೂ ಸಿಗದಂತ ನಿಶ್ಯಬ್ಧತೆ , ತಂಪ್ಪಿಕ್ಕುವ ವಾಯುರಾಯ, ನಿಜಕ್ಕೂ ಮನಸ್ಸಿನ ಉಲ್ಲಾಸಕ್ಕೆ ಮೆಟ್ಟಿಲುಗಳಾದವು.

ಮನಸಿನ ಹಲವಾರು ಜಾಡುಗಳನ್ನು ಮರೆತು , ಮನಸ್ಸಿಗೆ ಹಿತನೀಡುವಲ್ಲಿ ಆ ಜಾಗ ಗೆದ್ದಿತ್ತು.

ಅಲ್ಲಿ ಎಲ್ಲರೊಂದಿಗೆ ತಿಂದ ಉಪಹಾರದಂತೆ ಆ ಬೆಟ್ಟದ ಮೌನವೂ ಖಿನ್ನತೆಯನ್ನು ತನ್ನ ಮೌನದಲ್ಲೇ ತಿಂದು ಮುಗಿಸುತ್ತಿರುವಂತೆ ಭಾಸವಾಗುತಿತ್ತು.
ನಿಜಕ್ಕೂ ಮೊದಲ ಚಾರಣ ನೀಡಿದ ಖುಷಿ,ಮಗದೊಂದು ಚಾರಣ ಹೋಗುವ ಆಸೆಯ ಬೀಜವು ಅಲ್ಲೇ ಚಿಗುರೊಡೆದು ಮೊಗ್ಗಾಯಿತು.

ಆತ್ಮೀಯರೊಂದಿಗೆ ಆತ್ಮೀಯತೆಯ ಸ್ಪರ್ಶದಲ್ಲಿ , ಏಕಾಂತಕ್ಕೆ ಹೆಗಲು ಕೊಡುವ ಅಲ್ಲಿಯ ವಾತಾವರಣದೊಂದಿಗೆ ಪ್ರಕೃತಿಯ ಸವಿಯನ್ನು ಸವಿದದ್ದು ಅಲ್ಲಿಯೇ.

ಮತ್ತೊಂದು ಚಾರಣ ನೀರಿಕ್ಷೆಯಲ್ಲಿ ಸದಾ.... ಹಸಿರಾಗಿ .... ಉಸಿರಾಗುತ್ತಿರುವ....


ನಾನು ಮಗು ನಿನ್ನ ಮಗು ನಿನ್ನ ಕುಂಬೆ ರೆಂಬೆ ಹಬ್ಬಿ ಮಗು ನಿನ್ನ ನೆನೆದು  ಅಳುವ ಮಗು ನಿನ್ನ ಅಪ್ಪಿ ನಗುವ ಮಗು ನಿನ್ನ ನೋಡಿ ಕುಣಿವ ಮಗು ನಿನ್ನ ಹಸಿರ ಬನದಿ ಬೆಳೆವ ಉಸಿರ ಮ...