ಕಾಸರಕೂಸು

ಏಕಾಂತೆಯ ತರಂಗಗಳ ಅರಸಿ..

ಮಂಗಳವಾರ, ಮೇ 18, 2021

     ಕೊರೋನಾ ಅದೆಷ್ಟು ಜನರನ್ನು ಮಾನಸಿಕವಾಗಿ, ದೈಹಿಕವಾಗಿ ಅಂಟಿದೆಯೋ ಗೊತ್ತಿಲ್ಲ. ಆದರೆ ಈ ಕೊರೋನಾ ಕೆಲವಷ್ಟು ಜನರ ಆರೋಗ್ಯ, ಆಯಸ್ಸು, ನಿದ್ರೆ, ನೆಮ್ಮದಿ ಹೀಗೆ ಏನೆಲ್ಲಾ ಕಸಿದು ಕಬಳಿಸಿದೆ ಎಂಬುದು ಆಯಾ ಪರಿಸ್ಥಿತಿಯಲ್ಲಿರುವವರು ಮಾತ್ರ ಹೇಳಲು ಸಾಧ್ಯ. ಶ್ರಮವನ್ನೇ  ನಂಬಿ ದುಡಿಯುವ ಆತ್ಮವಿಶ್ವಾಸದ ಜೀವಗಳಿಗೆ ಇದಾವುದು ಬಾಧಿಸಿರುವುದಿಲ್ಲ.
    ಕೊರೋನಾದ ಎರಡನೆಯ ಅಲೆಯ ಲಾಕ್ಡೌನ್ ದಿನಗಳು,  ನನ್ನನ್ನು ಆರೋಗ್ಯಕ್ಕಿಂತ ಹೆಚ್ಚಾಗಿ ಕಾಡಿದ್ದು, ನನ್ನ ಬರವಣಿಗೆಯ ಮೇಲೆ. ಮನಸ್ಸಿಗೆ ಕೊರೋನಾ ಹಿಡಿದಿದೆ ಎಂದನಿಸಿದ ಮೇಲೆ,  ಬರವಣಿಗೆಯಲ್ಲಿ ಕೊರೋನಾ ಲಕ್ಷಣಗಳು ಒಂದೊಂದೇ ಕಾಡತೊಡಗಿದವು. ನನಗೇಕೋ ಲಕ್ಷಣಗಳು ಹೆಚ್ಚಾಗುತ್ತಿವೆ ಎಂದು ಭಾಸವಾಗಿ ಪರೀಕ್ಷಿಸಲು ಪುಸ್ತಕ, ಪೆನ್ನು ಹಿಡಿದು ಗಂಟೆ ಗಟ್ಟಲೆ ಕೂತರೂ ದೊರೆತದ್ದು , ನಿರೀಕ್ಷೆ ಯಂತೆಯೇ ಕೊರೋನಾದ ಪಾಸಿಟಿವ್ ಲಕ್ಷಣಗಳು. ಅನುಭವಿಸಲಾಗದ ಪರಿಸ್ಥಿತಿ. ಏನೆಲ್ಲಾ ಔಷದೋಪಚಾರ ದೊರೆದರೂ ಸರಿಯಾಗದಂತಹ ಬರವಣಿಗೆಬಾರದ ಸ್ಥಿತಿ. ಆದಷ್ಟೂ ಬೇಗ ಕೊರೊನಕ್ಕೆ ಕೊರೋನಾದ ಮೂರನೆಯ ಅಲೆ ಅಪ್ಪಳಿಸಲಿ ಎಂದು ಶಪಿಸುತ್ತ ಕೂರುತ್ತಿದ್ದ ನನಗೆ, ಕೊನೆಗೂ ಬರವಣಿಗೆ ಅಪ್ಪಳಿಸಿದ್ದು ಈ ಅನಿಸಿಕೆ ವ್ಯಕ್ತವಾಗುವ  ಮೂಲಕ. 




ನಾನು ಮಗು ನಿನ್ನ ಮಗು ನಿನ್ನ ಕುಂಬೆ ರೆಂಬೆ ಹಬ್ಬಿ ಮಗು ನಿನ್ನ ನೆನೆದು  ಅಳುವ ಮಗು ನಿನ್ನ ಅಪ್ಪಿ ನಗುವ ಮಗು ನಿನ್ನ ನೋಡಿ ಕುಣಿವ ಮಗು ನಿನ್ನ ಹಸಿರ ಬನದಿ ಬೆಳೆವ ಉಸಿರ ಮ...