ಏಳುಬೀಳಿನ ಬಾಳ ಪಥದಲ್ಲಿ
ಒಬ್ಬಂಟಿ ಧ್ಯಾನ..!
ಭಾವನೆಗಳು ತಲೆಶೂಲ
ಏಕಾಂತ ಹಿತವೆನಿಸಿ
ಸಾನಿಧ್ಯ ಸಾಕೆನಿಸಿ
ನೆನಪಿನ ದಾರಿ ಸವೆದು
ಆಹ್ವಾನ ಬೇಡೆನಿಸಿ
ಸಿಹಿ ನೆನಪು ಉಪ್ಪಿನ ಮುಪ್ಪಾಗಿ
ತಳ್ಳಿದಷ್ಟು ದೂರ.. ಸಾಗಿ
ಮನಸ್ಸಿನ ಮರ್ಕಟ ತಿಂದು
ಮಣ್ಣಾ ಕಣದ ಅಣುವಾಗಿ
ಹೆಬ್ಬಂಡೆ ತಾಕಿದರು..
ಅಲುಗಾಡದಂತೆ
ವಾರಿಧಿಯ ಭೋರ್ಗರೆತದೊಳಗೆ
ಮರೆವಿನ ಕಂಬಳಿ ಹೊದ್ದು
ಮರುಜನ್ಮ ಅರಸಿ
ಮಗುವಾಗಿ
ಮಲಗಿಬಿಡುವಾಸೆ.
ಒಬ್ಬಂಟಿ ಧ್ಯಾನ..!
ಭಾವನೆಗಳು ತಲೆಶೂಲ
ಏಕಾಂತ ಹಿತವೆನಿಸಿ
ಸಾನಿಧ್ಯ ಸಾಕೆನಿಸಿ
ನೆನಪಿನ ದಾರಿ ಸವೆದು
ಆಹ್ವಾನ ಬೇಡೆನಿಸಿ
ಸಿಹಿ ನೆನಪು ಉಪ್ಪಿನ ಮುಪ್ಪಾಗಿ
ತಳ್ಳಿದಷ್ಟು ದೂರ.. ಸಾಗಿ
ಮನಸ್ಸಿನ ಮರ್ಕಟ ತಿಂದು
ಮಣ್ಣಾ ಕಣದ ಅಣುವಾಗಿ
ಹೆಬ್ಬಂಡೆ ತಾಕಿದರು..
ಅಲುಗಾಡದಂತೆ
ವಾರಿಧಿಯ ಭೋರ್ಗರೆತದೊಳಗೆ
ಮರೆವಿನ ಕಂಬಳಿ ಹೊದ್ದು
ಮರುಜನ್ಮ ಅರಸಿ
ಮಗುವಾಗಿ
ಮಲಗಿಬಿಡುವಾಸೆ.

ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ