ಮಣ್ಣಿನ ಕಣ್ಣೊಳಗೆ
ಹುದುಗಿಟ್ಟ ಮೊಳಕೆಯು
ಬಳ್ಳಿಯಾಗಿ ಬೆಳೆದು
ಬಾಂದಳದಲ್ಲಿ ಮೊಗ್ಗಾಗಿ
ಭುವಿಯಲ್ಲಿ ಹೂವಾಗಿ
ಬಾವುಲಿ ಕಾಟಕ್ಕೆ ಕಪ್ಪಾಗಿ
ಪಟ ಪಟ ರೆಕ್ಕೆ ಬಡಿದು
ತನ್ನೊಳಗೆ ಒದ್ದಾಡಿ
ಬಡಿದಾಡಿ, ಗುದ್ದಾಡಿ
ನಿಲ್ಲಲು ತಿಣುಕಾಡಿ
ಅಸುನೀಗುತಿಹುದು
* * * * * * * *
ಓ.. ವಿಧಿಯೇ...
ಏಕೆ.. ಇಷ್ಟೊಂದು ಘೋರ ನೀನು..?
ಒಲವನ್ನು ಹೊತ್ತು
ನೋವನ್ನು ಬಿತ್ತಿ.. ಸೆಳೆದುಬಿಟ್ಟೆಯಾ..
ಸ್ವಲ್ಪವಾದರೂ ಕರುಣೆ
ಇಲ್ಲದಾಯಿತೇ....
ಪ್ರೀತಿಸುವ ಜೀವಗಳ
ಅಗಲಿಸುವುದರಲ್ಲೇನಿದೆ..
ನಿನಗೆ ಆಹ್ಲಾದ..??
ಕಂದಮ್ಮ ಕಣ್ಣು ಮಿನುಕಿಸುವ
ಮೊದಲೇ ಸೃಷ್ಟಿಕರ್ತನ
ಮರಣ ಪಲ್ಲಕ್ಕಿಯಲ್ಲಿ ಮಲಗಿಸಿ ಬಿಟ್ಟೆಯಲ್ಲ
ಕಟ್ಟಿದ ಕನಸಿನ ಗೋಪುರದ
ಅಡಿಪಾಯ ಕೆಡವಿ ಬಿಟ್ಟೆಯಲ್ಲ
ಸಹಿಸುವ ಶಕ್ತಿಯಾದರೂ.. ಹೇಗೆ..?
ನೀನೇ ಹೇಳು..ಓ ಶೂರ ವಿಧಿಯೇ..
ನಿನಗಿಲ್ಲವೇ.. ಅಂತಃಕರಣ?? ಓ.. ವಿಧಿಯೇ...
ಓ... ಘನಘೋರ... ನೀಚ.. ಕ್ರೂರ ವಿಧಿಯೇ..

ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ