ಉಸಿರಿಗೆ ಬಸಿರಿನ ಮುನ್ನುಡಿ
ಬಿರಿದ ಮೊಳಕೆ ಬಸರು ಹೊತ್ತು
ಜಗಿದು ಉಗಿದ ಕನಸು ತಿಂದು
ನಿತ್ಯ ನೂರು ಬವಣೆ ಸಹಿಸಿ
ಬಾಳ ಕೂಸು ಒದೆದ ಭಾಸ
ಕಷ್ಟ ಮಾಯವಾಗಿ ದಿವಸ
ಭಾವನೂರು ಉಕ್ಕಿ ಹರಿವ ಒಲವು
ಬಾಳ ದಿನದ ಕನಸು ಸವಿದು
ಬೆವರು ಬಸಿದು
ಉಸಿರು ನೀಡಿ
ರಕ್ತ ಪಸರಿ
ಮಾಂಸ ಹಂಚಿ
ಗಾಯ ಬಿರಿದು
ನೋವು ಚೀರಿ
ಜೀವ ಹಡೆವ, ದೈವ ಮಾತೃ
ಆತ್ಮದಿಂದ ತಿದ್ದಿ ತೀಡಿ ರೂಪುಕೊಟ್ಟು
ಅರಿವ ದಾರಿಯನ್ನೇ ತೋರಿ
ತಾನು ಬತ್ತಿ, ಕಣ್ಣ ನೀರು ಎರೆದು
ಕಂಡ ಫಲದಿ ಜಗದ ಖುಷಿಯ ಮೆರೆವ
ಸಾರ್ಥಕತೆಯ ಸತ್ತ್ವದಂತೆ
ತಾಯಿ ಮನದ ನನ್ನ ಕವಿತೆ ಭಾವ.

ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ