ಕಾಸರಕೂಸು

ಏಕಾಂತೆಯ ತರಂಗಗಳ ಅರಸಿ..

ಸೋಮವಾರ, ನವೆಂಬರ್ 23, 2020

ಏಕಾತ್ಮ

ನನ್ನೊಳಗಿನ ಕವಿತೆ ಏಕಾತ್ಮ
ಅರಿವಿನ ಪರಮಾತ್ಮ
ಕವಿತೆಯ ಒಡಲ
ಉಸಿರಿನಲ್ಲಿರುವ ಹಸಿರಾಂಶ
ಚಿಗುರೊಡೆಯುತ್ತಲೇ ಹಬ್ಬಿ
ವ್ಯಾಪಿಸಿ ಬಿರಿಯುತ್ತದೆ
ಶಯನದಲ್ಲಿದ್ದರೂ ಅರಸಿ
ರಮಿಸುವ ಸವಿಗನಸಿನ ಏಕಾಂತ
ಪ್ರಶಾಂತತೆಗೆ ಕೈ ಇಟ್ಟಾಗ ಲೇಖನಿಯ
ಶಾಹಿಯಲ್ಲಿ ಬರೆದುಕೊಳ್ಳುತ್ತಾ ಸಾಗಿ
ಕ್ಷಣಮಾತ್ರದಲ್ಲಿ ಸದ್ದಾದರೆ
ಮರೆವಿನ ಗುಳಿ ಹೊಕ್ಕಿ ಮಿಂಚಾಗಿ
ಆಗ-ಈಗ ಸ್ವಲ್ಪ ಇಣುಕಿದರೂ
ಭಾವನೆಗಳ ಭಾವಕ್ಕೆ ಬಿಗಿದಪ್ಪಿ
ತಿಳಿದು ಬಳಿದು ಬಣ್ಣ ಮೆತ್ತಿ
ರೂಪು ನೀಡಿ ಹಡೆಯದೆ 
ಮೈಯಿಳಿಯುತ್ತದೆ 
ಕವಿತೆಯೊಳಗೊಂದು ಕವಿತೆ 
ಉಸಿರಾಡಿ ಬಸಿರ ಅಡಗಿಸಿಟ್ಟ 
ಗ್ರಹಿಕೆಯ ಅರಿವ ಪರಿವು 
ಅವರವರ ಭಾವಾರ್ಥದಲ್ಲಿ 
ಮೇಳೈಸಿ ನಲಿಯುತ್ತಿರುತ್ತದೆ. 


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಾನು ಮಗು ನಿನ್ನ ಮಗು ನಿನ್ನ ಕುಂಬೆ ರೆಂಬೆ ಹಬ್ಬಿ ಮಗು ನಿನ್ನ ನೆನೆದು  ಅಳುವ ಮಗು ನಿನ್ನ ಅಪ್ಪಿ ನಗುವ ಮಗು ನಿನ್ನ ನೋಡಿ ಕುಣಿವ ಮಗು ನಿನ್ನ ಹಸಿರ ಬನದಿ ಬೆಳೆವ ಉಸಿರ ಮ...