ಅನ್ನಿಸಲೇ ಇಲ್ಲ
ಉರಿಮುಖದ ಸಹಾನುಮೂರ್ತಿಯ
ಒಳಗಿನ ಭಾವ ಎಂದೂ
ಅರಿಯಲೇ ಇಲ್ಲ, ಅರಿತ್ತದ್ದು ಒಂದೇ
ವಟ ವಟ ಎನ್ನುವ ಬೈಗುಳ
ರೋಗಕ್ಕೆ ನಂಟು ಬಿದ್ದು
ಬೆವರಲ್ಲೇ ಉಣ ಬಡಿಸಿದರೂ
ಕಂಡಿದ್ದು ನನ್ನ ಹಸಿವಷ್ಟೆ
ಮೊಳಕೆಯೊಡೆದ ಅದೆಷ್ಟೋ
ತನ್ನೊಳಗನ್ನು ಸಂಸಾರದ
ಕೆನ್ನಾಲಗೆಯಲ್ಲಿ ಅದ್ಹೇಗೆ
ಚಿವುಟಿರಬಹುದು?
ಸೊರಗಿ ಮೂಡಿದ ಸೀರೆಯ
ನೋವಿನ ನೆರಿಗೆಗಳನು
ಅಮ್ಮ, ಎಂದಿಗೂ ಬಿಚ್ಚಿ
ಹರಡಲಿಲ್ಲ
ನಕ್ಕು ಹರಡಿದರೂ ಅದ
ಅರಿಯುವ ಗೋಜು
ಯಾರಿಗಿರಲಿಲ್ಲ
ಒಮ್ಮೆ ಅಲ್ಲಿಂದ ಕಾಲ್ಕಿತ್ತರೆ
ಸಾಕೆನ್ನುತ್ತಿದ್ದ ಮನವಿಂದು
ಘಾಸಿಗೊಂಡು ಉರಿವ
ಅದೇ ಕರಿನೆರಳ
ಪಾಪ ಪ್ರಜ್ಞೆಯ ಭಾಸದಲಿ.

ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ