ಕಾಸರಕೂಸು
ಮಂಗಳವಾರ, ಜುಲೈ 9, 2024
ಶುಕ್ರವಾರ, ಅಕ್ಟೋಬರ್ 27, 2023
ಬರೆದು ಹಗುರವಾಗುವ ಪ್ರಯತ್ನದಲ್ಲಿ.....
ಹೊರಟಿದ್ದೇನೋ ಪ್ರವಾಸವೇ.......
ಆರಂಭ ದಿನದ ಮುಂಜಾನೆಯಲ್ಲಿದ್ದ ಕುತೂಹಲ, ಖುಷಿಗಳು ಬರು ಬರುತ್ತಾ ಕ್ಷೀಣಿಸತೊಡಗಿದವು.
ಬಹಳವಾಗಿ ಕಾಡಿದ್ದು ಸಮಾನ ಮನಸ್ಕರ ಕೊರತೆ. ಕ್ಷಮಿಸಿ.....ಯಾರನ್ನು ದೂಷಿಸುವ ನಿಲುವು ನನ್ನದಲ್ಲ.
ನಿಮ್ಮೆಲ್ಲರಂತೆ ಬೇರೆಯವರು ಇರಲು ಸಾಧ್ಯವಿಲ್ಲ. ಕಾರಣ ವ್ಯಕ್ತಿಗತ ಭಿನ್ನತೆಗಳೆಂಬ ಸಹಜ ಗುಣ.
ಹೆಚ್ಚು ಏಕಾಂತವನ್ನು ಬಯಸುವವಳು ನಾ...
ಪ್ರವಾಸದಲ್ಲಿ ನನ್ನಿಚ್ಚೆಯ ನೋಟ, ನಡೆಯುವಿಕೆ, ಊಟ, ಇವುಗಳಲ್ಲಿ ಒಬ್ಬಳೇ ಹೊರಟ ದಾರಿಯಲ್ಲಿ ಜೊತೆಗೂಡಿದವರೊಂದಿಗೆ ಸೇರಿದೆ, ಮಾತಾಡಿದೆ, ಬೆರೆತೆ.
ದೃಷ್ಟಿಯಂತೆ ಸೃಷ್ಟಿ ಎಂಬುದು ಮನುಷ್ಯ ಗುಣ.
ವಿಶಾಲ ಮನೋಭಾವನೆ ಎಂಬ ದಯೆಯನ್ನು ದೃಷ್ಟಿಯಲ್ಲಿ ಬೆಳೆಸಿಕೊಂಡರೆ ಪ್ರತಿಯೊಬ್ಬರು ಭಿನ್ನತೆಯಲ್ಲೂ ಅನನ್ಯವೆಂಬುದು ನನ್ನ ಅನಿಸಿಕೆ.
ಇಂತಹ ಭಿನ್ನ ಸಂಗತಿಗಳ ನಡುವೆಯೂ ಪ್ರವಾಸದಲ್ಲಿ ನನ್ನದೇಯಾದ ಅಳತೆ ಗೋಲಿನಲ್ಲಿ ಬೆರೆತು ಖುಷಿಯ ಕ್ಷಣಗಳನ್ನು ಸವಿದಿದ್ದೇನೆ.
ಸುಂದರ ಕ್ಷಣದ ನೆನಪುಗಳಿಗೂ.... ನಿಮ್ಮೆಲ್ಲರಿಗೆ ಮನತುಂಬಿದ 🙏ಧನ್ಯವಾದಗಳು🙏
ಸೋಮವಾರ, ಜುಲೈ 24, 2023
ಕವಿತೆ (ಕಥೆ )
ನಾಲ್ಕು ಸಾಲು ಬರೆದು ತಿಳಿಸಿ ಬರವಣಿಗೆ ಕುರಿತು, ಎಂದು ಕೇಳಿ ಎಷ್ಟೋ ವರುಷಗಳು ಕಳೆದಿದ್ದವು.
ಭೋರ್ಗರೆದು ಸುರಿವ ಚಡಿ ಮಳೆ,ಕತ್ತಲೆಯನ್ನು ನುಂಗಿ ಚಂದಿರನೂ ಕಪ್ಪಾಗಿ ಎಲ್ಲಿ ನೋಡಿದರೂ ಕತ್ತಲು, ಆ ರಾತ್ರಿಯಲ್ಲಿ ಹಾಸಿಗೆಯಲ್ಲಿ ಅಂಗಾತ ಮಲಗಿದ್ದ ಸ್ಯಾಲಿನಾಳಿಗೆ ಈ ಮೇಲಿನ ಸಾಲುಗಳು ಕೊರೆಯ ತೊಡಗಿದವು.
ಬೆಳಗಾಗುವವರೆಗೂ ಒದ್ದಾಡಿ, ಸ್ವಲ್ಪ ಬೆಳಕು ಕಾಣಿಸಿದೊಡನೆ ಬೇಗ ಬೇಗ ಕೆಲಸವನ್ನು ಮುಗಿಸಿ, ಅವನು ನಾಲ್ಕು ಸಾಲು ಬರೆದು ಕೊಟ್ಟರೆ, ಆ ಸಾಹಿತಿ ಮೇಧಾವಿಗೆ, ಅವನಿಷ್ಟ ಪಡುವ ಬೋನ್ಸಾಯ್
ಮರದ ಬೀಜಗಳನ್ನಾದರೂ ಕೊಡುವ ಎಂದು ಯೋಚಿಸುತ್ತಾ, ಮನೆಯ ಮೂಲೆಯಲ್ಲಿ ಡಬ್ಬದಲ್ಲಿ ಇಟ್ಟಿದ್ದ ಬೀಜಗಳನ್ನು ತನ್ನ ಬಟ್ಟೆಗೆ ಗಂಟು ಹಾಕಿದಳು.
ಯಾರೂ ಇಲ್ಲದೆ ಮನೆ -ಮನಗಳಲ್ಲಿ ಒಂಟಿಯಾಗಿದ್ದ ಸ್ಯಾಲಿನೋ ಮನೆಗೆ ಒಂದು ದೊಡ್ಡ ಬೀಗ ಜಡಿದು ಹೊರಟಳು. ಆ ಬೀಗ ಮತ್ತೆ ಮತ್ತೆ ಅವಳನ್ನು ಕರೆಯುತ್ತಿರುವಂತೆ ಭಾಸವಾಗಿ, ಹಿಂದಿರುಗಿ ಬಂದು ಬೀಗವನ್ನು ಅಲ್ಲಾಡಿಸಿ ನೋಡಿ, ಮರೆದು ನಡೆದಿದ್ದ ಛತ್ರಿ ಯನ್ನು ಹಿಡಿದು ಹೊರಟಳು.
ಜಲಪಾತದಂತೆ ಭೋರ್ಗರೆದು ಸುರಿಯುತ್ತಿರುವ ಮಳೆ, ಮಣ್ಣನ್ನು ತನ್ನೊಡನೆ ಹೊತ್ತು ತರುವಷ್ಟು ರಭಸವಾಗಿ ಬೀಸುತ್ತಿರುವ ಗಾಳಿ , ಸೂರ್ಯನು ಪೂರ್ಣವಾಗಿ ಮೂಡಿರದ ಆ ನಸು ಬೆಳಕಿನಲ್ಲಿ(ಅವನಿದ್ದಲ್ಲೆಲ್ಲ ಬೆಟ್ಟ ಗುಡ್ಡ -ಭೋರ್ಗರೆವ ಚಡಿ ಮಳೆ ಎಂದು ಮನದಲ್ಲಿ ಪ್ರೀತಿಯಿಂದ ಶಪಿಸುತ್ತ) ಕಾಲುವೆಯಂತಾಗಿದ್ದ ದಾರಿಯಲ್ಲಿ, ಹಸಿವು, ಆಯಾಸವನ್ನು ಲೆಕ್ಕಿಸದೆ,ದಪ್ ದಪ್ ಎಂದು ಕಾಲು ಹಾಕುತ್ತಾ ಆ ಕಾಡು ದಾರಿಯಲ್ಲಿ ಹೆಜ್ಜೆ ಹಾಕಿದಳು.
ಕೊನೆಗೂ,ಅವನ ಮನೆ ಅಂಗಳ ತಲುಪಿ, ಗಿಲ್ಬರ್ಟ್.... ಗಿಲ್ಬರ್ಟ್... ಎಂದು ಏರುಧ್ವನಿಯಲ್ಲಿ ಕರೆದಳು. ಮುಚ್ಚಿದ ಬಾಗಿಲು, ಉತ್ತರವಿಲ್ಲ. ಮತ್ತೆ ಜೋರು ಧ್ವನಿಯಲ್ಲಿ ಕಿರುಚಿದಳು,
ಗಿಲ್ಬರ್ಟ್... ಗಿಲ್ಬರ್ಟ್.....
ಆ ಕಡೆಯಿಂದ ವಯಸ್ಸಾದ ಒಂದು ಧ್ವನಿ ಮಾತಾಡಿತು......
ಯಾರೋ...!
ಅವನಿಲ್ಲ ಹೋಗಾಯಿತು....
ಬರುವುದು ಇನ್ನೆಲ್ಲಿ....
ಸ್ಯಾಲಿನೋ ಆ ಮಾತುಗಳನ್ನು ಕೇಳಿದೊಡನೆ, ಅವನ ಮನೆಯಂಗಳದ ಮನದಲ್ಲಿಯೇ ಕುಸಿಯತೊಡಗಿದಳು. ಮಳೆ, ಗಾಳಿ ಮಣ್ಣು, ತರಗೆಲೆಗಳು ಅವಳನ್ನು ಸಂಪೂರ್ಣವಾಗಿ ಆವರಿಸಿದವು. ತಿಂಗಳು ಕಳೆದು, ಮಳೆಯೂ ನಿಂತಿತು.
ಮನೆಗೆ ವಾಪಾಸ್ಸದ ಗಿಲ್ಬರ್ಟ್.ಮನೆ ಅಂಗಳದಲ್ಲಿ ಒಂದು ಬೋನ್ಸಾಯ್ ಗಿಡ ಬೆಳೆದು ನಗುತ್ತಿರುವುದು ಗಮನಿಸಿದ. ಹತ್ತಿರ ಹೋದ, ಹೊಸ ಗಿಡ ಹುಟ್ಟಿದೆ. ಅಮ್ಮನನ್ನು ಕೂಗಿದ... ಗುದ್ದಲಿ ತಾ.. ಹದ ಮಾಡುವ ಬೋನ್ಸಾಯ್ ಗಿಡ ಹುಟ್ಟಿ, ಚಂದದಿ ನಗುತಿದೆ. ಇದರ ಮೇಲೆ ಒಂದು ಕವಿತೆ ಬರೆದು ಪ್ರೀತಿಯಿಂದ ಓದಿ ಹಗುರಾಗಬೇಕು.
ಶನಿವಾರ, ಜೂನ್ 17, 2023
ಕಾಡುವಿಕೆ
ದಿನಾ ಸಂಜೆಯಾಗುವ ವೇಳೆಗೆ ಮಕ್ಕಳ, ಗಲಾಟೆ, ಕಿರಿಕಿರಿ, ತಲೆನೋವು....
ಅಪ್ಪಾ... ಸಾಕಪ್ಪ, ಮನೆಗೆ ಹೋಗಿ ರೆಸ್ಟ್ ಮಾಡುವ ಅನ್ನಿಸುತ್ತಿದ್ದ ನನಗೆ ಬೇಸಿಗೆ ರಜಾ ದಿನಗಳಲ್ಲಿ,ಆ ಮಕ್ಕಳ ಗಲಾಟೆ, ನನ್ನೊಂದಿಗಿನ ಮಾತು, ಚಾಡಿತನ, ಅವರ ನಗು, ಮುಗ್ದತೆ, ಪಿಸುಗುಟ್ಟುವಿಕೆ, ವಿಧೇಯತೆ, ವಿನಯ, ಗೌರವ, ನನ್ನೊಂದಿಗಿನ ಆತ್ಮೀಯತೆ, ಅವರೊಂದಿಗಿನ ಒಡನಾಟಗಳು ಬಹುವಾಗಿ ಕಾಡುತ್ತಿವೆ.
ಎಷ್ಟಾದರೂ ನನ್ನ ಶಾಲೆಯ ಮಕ್ಕಳು, ನಮ್ಮ ಮಕ್ಕಳು, ದೇವರಂತ ಮುಗ್ಧ ಮಕ್ಕಳು.
Miss you All
ಖುಷಿಯ ಅಮಲೇರಿದ ದಿನ (ಚಾರಣ )
ಬಹುದಿನದ ಆಸೆ, ಕನಸು, ಹಂಬಲ.... ನಾನೂ trekking ಹೋಗಬೇಕೆಂಬುದು. ಆದರದೋ ಕೂಡಿಬಾರದ ದಿನವಾಗಿತ್ತು. ಹಪಾಹಪಿ ತನದ ಪ್ರಯತ್ನವಾಗಿ, ಅಂದಿನ ದಿನ ನಾನು ತಂಡದೊಂದಿಗೆ ಪಾರ್ವತಮ್ಮ ಬೆಟ್ಟಕ್ಕೆ ಖುಷಿ, ಕುತೂಹಲ ದೊಂದಿಗೆ ಚಾರಣ ಹೋದದ್ದು ಕನಸಿನ ಬೀಜಕ್ಕೆ, ಹದಗೊಳಿಸಿದ ತಂಪು ಮಣ್ಣಿನ ಸ್ಪರ್ಶ ದೊರೆತ ಖುಷಿಯಾಯಿತು.
ಪ್ರಕೃತಿಯೊಂದಿಗಿನ ಒಡನಾಟದ ಮುಂದೆ ನಾನೆಂಬುದು ಏನಿಲ್ಲವೆನಿಸಿತು. ಮೋಡ ಕವಿದ ವಾತಾವರಣ, ಹುಡುಕಿದರೂ ಸಿಗದಂತ ನಿಶ್ಯಬ್ಧತೆ , ತಂಪ್ಪಿಕ್ಕುವ ವಾಯುರಾಯ, ನಿಜಕ್ಕೂ ಮನಸ್ಸಿನ ಉಲ್ಲಾಸಕ್ಕೆ ಮೆಟ್ಟಿಲುಗಳಾದವು.
ಮನಸಿನ ಹಲವಾರು ಜಾಡುಗಳನ್ನು ಮರೆತು , ಮನಸ್ಸಿಗೆ ಹಿತನೀಡುವಲ್ಲಿ ಆ ಜಾಗ ಗೆದ್ದಿತ್ತು.
ಅಲ್ಲಿ ಎಲ್ಲರೊಂದಿಗೆ ತಿಂದ ಉಪಹಾರದಂತೆ ಆ ಬೆಟ್ಟದ ಮೌನವೂ ಖಿನ್ನತೆಯನ್ನು ತನ್ನ ಮೌನದಲ್ಲೇ ತಿಂದು ಮುಗಿಸುತ್ತಿರುವಂತೆ ಭಾಸವಾಗುತಿತ್ತು.
ನಿಜಕ್ಕೂ ಮೊದಲ ಚಾರಣ ನೀಡಿದ ಖುಷಿ,ಮಗದೊಂದು ಚಾರಣ ಹೋಗುವ ಆಸೆಯ ಬೀಜವು ಅಲ್ಲೇ ಚಿಗುರೊಡೆದು ಮೊಗ್ಗಾಯಿತು.
ಆತ್ಮೀಯರೊಂದಿಗೆ ಆತ್ಮೀಯತೆಯ ಸ್ಪರ್ಶದಲ್ಲಿ , ಏಕಾಂತಕ್ಕೆ ಹೆಗಲು ಕೊಡುವ ಅಲ್ಲಿಯ ವಾತಾವರಣದೊಂದಿಗೆ ಪ್ರಕೃತಿಯ ಸವಿಯನ್ನು ಸವಿದದ್ದು ಅಲ್ಲಿಯೇ.
ಮತ್ತೊಂದು ಚಾರಣ ನೀರಿಕ್ಷೆಯಲ್ಲಿ ಸದಾ.... ಹಸಿರಾಗಿ .... ಉಸಿರಾಗುತ್ತಿರುವ....
ಶುಕ್ರವಾರ, ಜೂನ್ 9, 2023
ಮಂಗಳವಾರ, ಜನವರಿ 24, 2023
ಸೋಮವಾರ, ನವೆಂಬರ್ 21, 2022
ನನ್ನೊಳಗಿನ ಬುದ್ಧ
ಹಸಿರ ಉಸಿರಂತೆ
ಸದಾ ಹಸನ್ಮುಖಿ
ಪಕ್ಷಿಯಂತೆ ಪಟ ಪಟ
ಸೊರಗಿದಾಗಲೆಲ್ಲ
ಅಮ್ಮನಾಗುತ್ತಾನೆ
ಕರಗಿದಾಗಲೆಲ್ಲ
ಅವ ಜಾಗೃತನಾಗುತ್ತಾನೆ
ಶಾಂತತೆಗೂ ಶಾಂತ
ಈ ನನ್ನೊಳಗಿನ ಬುದ್ಧ
ಶಾಂತತೆಯ ಬಾಣ
ಮಾಡಿ ಕಾಡಿ ಪೀಡಿಸಿ
ನಗುವಿನ ಹೂವಾಗುತ್ತಾನೆ
ಕಾಡುವ ನಾಳೆಗಳಿಗೆ
ಭರವಸೆಯ ಬೆಳಕಾಗುತ್ತಾನೆ
ನಿನ್ನಾತ್ಮದಲ್ಲಿ ಬೆಳಗುವ
ಪ್ರೀತಿ ಜ್ಯೋತಿಯಂತೆ
ನನ್ನ -ನಿನ್ನೊಳಗಿನ ಬುದ್ಧನಿಗೆ
ಆ ಶುದ್ಧ ಬುದ್ಧನ ನೆರಳು
ಎಂದೂ ಕಾಡಿ ಮೋಹಿಸದಿರಲಿ
ಅವನಾತ್ಮದ ಬೆಳಗು
ಎಂದೆಂದಿಗೂ ನನ್ನ ನಿನ್ನಲ್ಲಿನ
ಕತ್ತಲು ಬೆಳಕು ಬೆರೆತ
ದಿವ್ಯ ಜ್ಯೋತಿಯಾಗಿ
ಜಗದೊಳಗಿನ ಕತ್ತಲಿನ
ಕಾರ್ಮೋಡಗಳಿಗೆ
ಸ್ಫೂರ್ತಿಯ ದಾರಿದೀಪವಾಗಿರಲಿ
ನೆನಪಿರಲಿ ಶುದ್ಧ ಬುದ್ಧನ
ನೆನಪಿನಲಿ
ಶನಿವಾರ, ನವೆಂಬರ್ 12, 2022
ಹೆಣ್ಣು
ಹೆಣ್ಣು
ಆದರೆ ಕುಂಕುಮವಿರಬೇಕಂತೆ
ಹೆಣ್ಣಂತೆ ಅವಳು
ಜೇಡರ ಬಲೆಯ ಜಡೆ ಇರಬೇಕಂತೆ
ಹೆಣ್ಣಂತೆ ಅವಳು
ನರಿಗೆಗಳೆಲ್ಲ ಮಣ್ಣಾಗುವವರೆಗೂ
ಬಾಗುತ್ತಿರಬೇಕಂತೆ
ಹೆಣ್ಣಂತೆ ಅವಳು
ಜನ್ಮ ಸಾರ್ಥಕತೆಯ
ಮಕ್ಕಳಿರಬೇಕಂತೆ
ಹೆಣ್ಣಂತೆ ಅವಳು
ನೌಕರಿ, ಸೌಕರ್ಯಗಳ
ಉಸಾಬರಿ ಬೇಕಿಲ್ಲವಂತೆ
ಹೆಣ್ಣಂತೆ ಅವಳು
ಮನೆಯೊಳಗೆ ಆಕಾಶ ನೇಯ ಬೇಕಂತೆ
ಹೆಣ್ಣಂತೆ ಅವಳು
ಬಯಕೆ ಬಾಣಲೆ ಬೇಯಿಸಿ
ಮನಸ್ಸು, ಕನಸುಗಳ
ಅಡುಗೆ ಮಾಡಿ ಬಡಿಸಬೇಕಂತೆ
ಹೆಣ್ಣಂತೆ ಅವಳು
ಅಧೀನತೆ ಅವಳ ಆ ಜನ್ಮಸಿದ್ಧ ಹಕ್ಕಂತೆ
ಹೆಣ್ಣಂತೆ ಅವಳು
ಸದಾ ನಗುತ್ತಿರಬೇಕಂತೆ
ಕತ್ತಲ್ಲಲ್ಲಿರುವ ಹಣತೆಯಂತೆ
ಹೆಣ್ಣು ಹೂವಂತೆ
ನೋವಲ್ಲೂ ನಗಬೇಕಂತೆ
ಹೆಣ್ಣು ಕೋಮಲೆಯಂತೆ
ಸ್ವಾತಂತ್ರ್ಯ ಬಳಿ ಸುಳಿಯಬಾರದಂತೆ
ಈ ಹೂವು, ಹಾವುಗಳ
ಲೆಕ್ಕಾಚಾರವೆಲ್ಲ ಎಷ್ಟು ದಿನ?
ಶರಣೆಂಬ ಅಸ್ತ್ರ
ಕತ್ತರಿಸಿ, ಧೈರ್ಯ ವೆಂಬ
ಅಸ್ತ್ರಕ್ಕೆ ಕೈ ಚಾಚುವವರೆಗೆ.
ಮಂಗಳವಾರ, ಜುಲೈ 19, 2022
ನೀ ಎಂಬ ವರ್ಷಧಾರೆ
ನಾನೆಂಬ ಧರೆಯ ಮರೆತು ಬಿಟ್ಟೆಯಾ
ದೂರದ ಮುನಿಸು ತೋರಿ
ನೀಲಿ ಆಕಾಶದಲೆಲ್ಲೋ ಅವಿತು ಬಿಟ್ಟೆಯಲ್ಲ
ನಾನೆಂಬ ನೆನಪುಗಳನ್ನು ಮಾಸಿ
ನಿನ್ನ ಹನಿಗಳಿಲ್ಲದೆ
ಬಿರುಕು ಬಿಟ್ಟಿಹುದು ನನ್ನ ನಾಲಗೆ
ನಿನ್ನ ಸನಿಹವಿಲ್ಲದೆ
ನನ್ನ ಒಡಲ ಬಂಜರು ಹಿಂಡುತಿಹುದು
ನನ್ನ ಹಸಿರಿನ ವನಸಿರಿ
ನಿನ್ನ ಸ್ಪರ್ಶವಿಲ್ಲದೆ
ನಶಿಸಿ ನರಳುತಿಹುದು
ದಿನೇ ನಿನಗಾಗಿ
ನನ್ನ ಒಡಲ ಉಷ್ಣದಲ್ಲಿ
ಬೆಂದ ರೈತರು
ಕಣ್ಣೀರಿನ ಹಿಡಿಶಾಪ
ಹಾಕುತಿಹರು
ನನ್ನೊಂದಿಗಿನ ಮುನಿಸು ಬೇಡ
ಬಾ ಬಾ ಆದಷ್ಟು ಬೇಗ
ನನ್ನ ತಣಿಸಿ ನನ್ನೊಂದಿಗಿನ
ಜೀವರಾಶಿಗಳನ್ನು ಹರ್ಷಿಸು ಬಾ
ನೀ ಎಂದೆಂದಿಗೂ....ನೀ
ನೀ ಇರದೆ ನಾನೆಂಬುದಿಲ್ಲ
ನಾ ನಾನಾಗಲು
ನೀ ನನ್ನೊಳಗಿರಬೇಕು
ನಿರೀಕ್ಷೆಯಲ್ಲಿ.....
ನಾನೆಂಬ ಧರೆ
ಗುರುವಾರ, ಜುಲೈ 14, 2022
ಯೋಚಿಸಬೇಡ ಮನವೆ
ನಾನೆಂದೂ ಬಿಟ್ಟು ಹೋಗುವವಳೇ
ನೀ ಯೋಚಿಸಿದಷ್ಟು ನಾ ದೂರ
ನನ್ನ ಕೊನೆ ಉಸಿರು
ನಿನ್ನಯ ಉಸಿರಿಗೆ ಉಸಿರಾಗಿರುತ್ತದೆ
ನೀ ಸೂರ್ಯನಂತಿಹನು
ಸದಾ ನಗುವಿನ ಆಭರಣ ಹೊದ್ದವನು
ನಾ ಇರಲಿ ಬಿಡಲಿ
ನೀ ನಗಲೇ ಬೇಕು, ಜಗ ಮರೆತು
ನಿನ್ನಿಂದ ಬೆಳೆದು ಹಸಿರಾಗಲಿರುವುದು
ಬಹಳಷ್ಟು
ನಿನ್ನ ಹರಿಯುವಿಕೆಯಲ್ಲಿ ಜೊತೆಗೊಂಡ
ಆಕಸ್ಮಿಕ ಝರಿಯಷ್ಟೆ
ನೀ ಪುಟ್ಟಿದಷ್ಟು ನಾ ಚಿಗುರುವೆ
ಒಳಗೊಳಗೆ ಮರವಾಗುವೆ
ನೀ ಬೆಳೆಯುತ್ತಿರು ಎಲ್ಲರ ಮನದ
ಹೆಮ್ಮರದಲಿ ಅಲ್ಲಿ ನಾ
ಗೂಡು ಕಟ್ಟುವೆ
ನೀ ನಡೆಯುತ್ತಿರುವ ಒಂಟಿಯಾಗಿ
ನಾ ಕಾವಲಾಗಿ ಹಿಂಬಾಲಿಸುವೆ
ಮೌನದಲಿ ಮಗ್ನನಾಗಿರು
ನಾ ಧ್ಯಾನದಲ್ಲಿ ಸೇರಿಕೊಳ್ಳುವೆ
ನೀ ದಾರಿದೀಪವಾಗುತ್ತಿರು
ಬೆಳಕಲ್ಲಿ ಮಿಣುಕುವ ಹುಳುವಾಗುವೆ
ನೀ ನಗುತ್ತಿರು, ನಿನ್ನ ನಗುವಲ್ಲೇ
ನಾ ನಗುವೇ, ನಲಿವೆ
ಬಾಳುವೆ ನಿನ್ನಾತ್ಮಲ್ಲೆ.
ನಾನೆಂಬುದು ಇಳೆ
ನೀ ಎಂಬುದು ಆಕಾಶವಲ್ಲ
ಆಕಾಶವೆಂಬುದು ದೂರವೇ
ಎಂದೆಂದಿಗೂ.....
ನೀನು ಬಿಳಿ ಚುಕ್ಕಿಯ
ಹನಿಗಳಾಗಿ ಉದುರುತ್ತಿರುವಾಗ
ಬಾಯ್ತೆರೆದು ಕಾಯುವೆ
ನೀ ನನ್ನ ಕಣ ಕಣಗಳನ್ನು
ಮೃದುವಾಗ ಸ್ಪರ್ಶಿಸಿ ಹರಸಿದಾಗ
ಮೈನೆರೆದು ಹಸಿರಾಗುವೆ
ನಿನ್ನ ಹನಿಗಳು ನನ್ನ ಚುಂಬಿಸಿದಾಗ
ಆ ಹಸಿರ ಉಸಿರನ್ನು ಧರಿಸಿ
ನಾ ಶೃಂಗಾರಗೊಳ್ಳುವೆ
ನನ್ನ ತನುವನ್ನು ನೀ
ಕದಿಯ ಬಂದವನಂತೆ
ನೀ ಹೀಗೆ ತಂಪನೆರೆಯುವಾಗ
ಒಂದಾಗಿ ನನ್ನೊಳಗಿಳಿದು
ಝರಿ ಎಂಬುದಾಗಿಯೋ
ಸಸಿ ಎಂಬುದಾಗಿಯೋ
ನನ್ನ ನಿನ್ನ ಪ್ರೀತಿಯ ಕುರುಹು
ಮೊಳಕೆಯೊಡೆದು
ಉಳುಮೆ ಒಡೆಯನ
ಮುಖವೆಂಬ ಎದೆಯಂಗಳದಲ್ಲಿ
ನಲಿದಾಡುತ್ತಿರಬೇಕು ಒಂದಾಗಿ ಸದಾ....
ಆದರೆ ನೀ ಎಂಬುದು
ಎಂದೂ ಆಕಾಶವಾಗದಿರಲಿ
ಆಕಾಶ ಇಳೆಗಳ ಅಂತರ
ನಾ ಎಂದಿಗೂ ದಾಟಲೊಲ್ಲೆ.
ಶುಕ್ರವಾರ, ಜೂನ್ 17, 2022
ನಿನ್ನನ್ನು ಕಣ್ತುಂಬಿಕೊಳ್ಳುವಾಸೆ
ದೀರ್ಘ ಉಸಿರು
ನನ್ನನ್ನು ಅರಸುವ ಮುನ್ನ
ಕಣ್ಣುಗಳು ಸದಾ ತೆರದಿರಲಿ
ಮುಚ್ಚುವ ಪ್ರಯತ್ನಬೇಡ
ಮರೆಯಾದೀತು ನಿನ್ನ ಬಿಂಬ
ಕಣ್ತುಂಬಿಕೊಳ್ಳುವಾಗ
ನಿನ್ನ ತನ ಬಿಟ್ಟು, ನನ್ನ ತನವ ಬಿಟ್ಟು
ಅಪ್ಪಿ ಬಿಡುವಾಸೆ
ನೀ ನಾನಾಗುವಾಗ ನಿನ್ನ ತನ ಮೆರೆದು
ನಾ ನೀನಾಗುವಾಗ ನನ್ನ ತನ ತೊರೆದು
ಇಬ್ಬರೂ ಕೂಡಿ ಒಂದಾಗುವಾಗ
ಜೀವನ ಹಸಿರಿನ ಪಸೆಯಾಗಲಿ
ದೀರ್ಘ ಉಸಿರು ನನ್ನ
ಅರಸುವ ಮುನ್ನ....
ಹಸಿರು ಮೆತ್ತಿ, ಮೊಳಕೆಯೊಡೆಸಿದ ನೀನೇ
ಮೊದಲಾಗಬೇಕು, ನನ್ನ ತನು ಮನವು
ಉಸಿರು ಬಿಟ್ಟಾಗ
ಮುತ್ತಿಕ್ಕಿ, ನಿನ್ನ ಹಸಿರು ಬನದಲಿ
ಅಂಗಾತ ಮಲಗಿಸಿ ಬಿಡು
ಸದಾ ಹಾತೊರೆದು ನಿರಾಸೆಯ
ನೀರನ್ನು ಸುರಿಸಿದ ನನ್ನ ಕಣ್ಣುಗಳಿಗೆ
ನಿನ್ನ ಮನಸ್ಸಿನಂತೆ ವಿಶಾಲ
ಬೊಗಸೆ ಕೈಗಳಿಂದ
ಹುಡಿ ಹುಡಿಯಾದ ಮಣ್ಣು
ಉದುರಿಸು, ಮುಂದೊಂದು
ಜನ್ಮದಲ್ಲಿ ನಿನ್ನ ಸಸಿಯಾಗುವೆ
ನನ್ನ ಕಣ್ಣುಗಳಿಂದ ಹರಿದು
ಪಸೆಯಾದ ನಿನ್ನಲ್ಲಿಯ
ಗುಡ್ಡವನ್ನು ಮುಚ್ಚಲು ನೀ
ಏನನ್ನು ಬಳಸುವೆ, ಯೋಚಿಸು...
ಆಗದು ಎಂದೂ ನಿನ್ನಿಂದ
ನೀ ಹುದುಗಿಸಿದಷ್ಟು ನಾ
ಚಿಗುರುವೆ, ಚಿಗುರುವೆ
ನಿನ್ನಯ ಮನದಲ್ಲಿ
ಸದಾ ಹಸಿರಾಗಿ ನಿನ್ನ ಉಸಿರಾಗಿ.
ಗುರುವಾರ, ಡಿಸೆಂಬರ್ 16, 2021
ತಾಳ್ಮೆ
ಹಿಡಿದ ತಾಳ್ಮೆಯ ಬತ್ತಿ
ಉರಿಯುತ್ತಲೇ ಇದೆ
ಆಗಾಗ ತಂಗಾಳಿ
ಆರಿಸಲೆಂದೋ ಉರಿಯನ್ನು
ಹೆಚ್ಚಿಸಲೆಂದೋ
ಬೀಸುತ್ತಲೇ ಇರುತ್ತದೆ
ಹಗಲು, ರಾತ್ರಿಗಳಲ್ಲೂ
ಬತ್ತಿ ಪ್ರಕಾಶಿಸುತ್ತಿತ್ತು
ವಾಯುರಾಯ ತನ್ನ ಪ್ರಭೆ
ಹೆಚ್ಚಿಸಿ ನಗುವಿನ ಅಲೆ
ಬೀರಿದ.
ಅದನ್ನೂ ಬಾಚಿ ತಬ್ಬಿ
ತನ್ನೊಳಗೆ ಬಚ್ಚಿಟ್ಟು
ಬತ್ತಿ ಇನ್ನಷ್ಟು ಪ್ರಜ್ವಲಿಸಿತು
ಬತ್ತಿಯಲ್ಲಿ ಬೆರೆತ
ಗಾಳಿ ತನ್ನಲ್ಲಿಯ ಗುಣ
ಬದಲಿಸಿ ಮತ್ತೆ ನಗುವಿನ
ಅಲೆ ಬೀರಿತು.
ಭಾವನೆಗಳು
ಕೊಳದಲ್ಲಿ ಭಾವನೆಗಳಿಗೆ
ಮುಳುಗಲು ಕಲಿಸುತ್ತಿದ್ದೇನೆ
ಮುಳುಗಿ ಮುಳುಗಿ
ಈಜ ಬಯಸಿದಾಗ
ಮತ್ತೆ ಮುಳುಗಿಸುತ್ತೇನೆ
ಮುಳುಗಿ ಮುಳುಗಿ
ಮತ್ತೆ ತೇಲ ಬಯಸಿದಾಗ
ಕತ್ತು ಹಿಸುಕಿ
ಉಸಿರುಗಟ್ಟಿಸಿದಾಗ
ಕಣ್ಣಂಚಿನ ನೀರಾಗಿ ಹರಿದು
ಅದೇ ಕೊಳವನ್ನು ಸೇರಿ
ಶಾಂತವಾಗುತ್ತವೆ.
ನನ್ನ ದಿನ
ಆಸೆಗಳು ಸತ್ತ ದಿನ
ನಾನು ಹುಟ್ಟಿದ ದಿನ
ನಿರೀಕ್ಷೆಗಳು ನೀರು ಕುಡಿದ ದಿನ
ನಾನು ಮರುಜನ್ಮವೆತ್ತಿದ ದಿನ
ಸ್ವತಂತ್ರವನ್ನು ಕಂಡುಕೊಂಡ ದಿನ
ನಾನು ನಾನಾದ ದಿನ
ಏಕಾಂತಕ್ಕೆ ಜೋತುಬಿದ್ದ ದಿನ
ನನ್ನಲ್ಲಿಯ ಬೆಳಕು ಸ್ಫೋಟಿಸಿದ ದಿನ
ಭಾವನೆಗಳನ್ನು ಮೆಟ್ಟಿನಿಂತ ದಿನ
ಸಮಸ್ತವನ್ನು ಗೆದ್ದು ನಿಂತ ನನ್ನ ದಿನ
ಶುಕ್ರವಾರ, ಡಿಸೆಂಬರ್ 3, 2021
ಹೆಣ್ಣು
ಹೆಣ್ಣು
ಆದರೆ ಕುಂಕುಮವಿರಬೇಕಂತೆ
ಹೆಣ್ಣಂತೆ ಅವಳು
ಜೇಡರ ಬಲೆಯ ಜಡೆ ಇರಬೇಕಂತೆ
ಹೆಣ್ಣಂತೆ ಅವಳು
ನರಿಗೆಗಳೆಲ್ಲ ಮಣ್ಣಾಗುವವರೆಗೂ
ಬಾಗುತ್ತಿರಬೇಕಂತೆ
ಹೆಣ್ಣಂತೆ ಅವಳು
ಜನ್ಮ ಸಾರ್ಥಕತೆಯ
ಮಕ್ಕಳಿರಬೇಕಂತೆ
ಹೆಣ್ಣಂತೆ ಅವಳು
ನೌಕರಿ, ಸೌಕರ್ಯಗಳ
ಉಸಾಬರಿ ಬೇಕಿಲ್ಲವಂತೆ
ಹೆಣ್ಣಂತೆ ಅವಳು
ಮನೆಯೊಳಗೆ ಆಕಾಶ ನೇಯ ಬೇಕಂತೆ
ಹೆಣ್ಣಂತೆ ಅವಳು
ಬಯಕೆ ಬಾಣಲೆ ಬೇಯಿಸಿ
ಮನಸ್ಸು, ಕನಸುಗಳ
ಅಡುಗೆ ಮಾಡಿ ಬಡಿಸಬೇಕಂತೆ
ಹೆಣ್ಣಂತೆ ಅವಳು
ಅಧೀನತೆ ಅವಳ ಆ ಜನ್ಮಸಿದ್ಧ ಹಕ್ಕಂತೆ
ಹೆಣ್ಣಂತೆ ಅವಳು
ಸದಾ ನಗುತ್ತಿರಬೇಕಂತೆ
ಕತ್ತಲ್ಲಲ್ಲಿರುವ ಹಣತೆಯಂತೆ
ಹೆಣ್ಣು ಹೂವಂತೆ
ನೋವಲ್ಲೂ ನಗಬೇಕಂತೆ
ಹೆಣ್ಣು ಕೋಮಲೆಯಂತೆ
ಸ್ವಾತಂತ್ರ್ಯ ಬಳಿ ಸುಳಿಯಬಾರದಂತೆ
ಈ ಹೂವು, ಹಾವುಗಳ
ಲೆಕ್ಕಾಚಾರವೆಲ್ಲ ಎಷ್ಟು ದಿನ?
ಶರಣೆಂಬ ಅಸ್ತ್ರ
ಕತ್ತರಿಸಿ, ಧೈರ್ಯ ವೆಂಬ
ಅಸ್ತ್ರಕ್ಕೆ ಕೈ ಚಾಚುವವರೆಗೆ.
ಹೆಣ್ಣು
ಹೆಣ್ಣು
ಆದರೆ ಕುಂಕುಮವಿರಬೇಕಂತೆ
ಹೆಣ್ಣಂತೆ ಅವಳು
ಜೇಡರ ಬಲೆಯ ಜಡೆ ಇರಬೇಕಂತೆ
ಹೆಣ್ಣಂತೆ ಅವಳು
ನರಿಗೆಗಳೆಲ್ಲ ಮಣ್ಣಾಗುವವರೆಗೂ
ಬಾಗುತ್ತಿರಬೇಕಂತೆ
ಹೆಣ್ಣಂತೆ ಅವಳು
ಜನ್ಮ ಸಾರ್ಥಕತೆಯ
ಮಕ್ಕಳಿರಬೇಕಂತೆ
ಹೆಣ್ಣಂತೆ ಅವಳು
ನೌಕರಿ, ಸೌಕರ್ಯಗಳ
ಉಸಾಬರಿ ಬೇಕಿಲ್ಲವಂತೆ
ಹೆಣ್ಣಂತೆ ಅವಳು
ಮನೆಯೊಳಗೆ ಆಕಾಶ ನೇಯ ಬೇಕಂತೆ
ಹೆಣ್ಣಂತೆ ಅವಳು
ಬಯಕೆ ಬಾಣಲೆ ಬೇಯಿಸಿ
ಮನಸ್ಸು, ಕನಸುಗಳ
ಅಡುಗೆ ಮಾಡಿ ಬಡಿಸಬೇಕಂತೆ
ಹೆಣ್ಣಂತೆ ಅವಳು
ಅಧೀನತೆ ಅವಳ ಆ ಜನ್ಮಸಿದ್ದ ಹಕ್ಕಂತೆ
ಹೆಣ್ಣಂತೆ ಅವಳು
ಸದಾ ನಗುತ್ತಿರಬೇಕಂತೆ
ಕತ್ತಲ್ಲಲ್ಲಿರುವ ಹಣತೆಯಂತೆ
ಹೆಣ್ಣು ಹೂವಂತೆ
ನೋವಲ್ಲೂ ನಗಬೇಕಂತೆ
ಹೆಣ್ಣು ಕೋಮಲೆಯಂತೆ
ಸ್ವಾತಂತ್ರ್ಯ ಬಳಿ ಸುಳಿಯಬಾರದಂತೆ
ಈ ಹೂವು, ಹಾವುಗಳ
ಲೆಕ್ಕಾಚಾರವೆಲ್ಲ ಎಷ್ಟು ದಿನ?
ಶರಣೆಂಬ ಅಸ್ತ್ರ
ಕತ್ತರಿಸಿ, ಧೈರ್ಯ ವೆಂಬ
ಅಸ್ತ್ರಕ್ಕೆ ಕೈ ಚಾಚುವವರೆಗೆ.
ಹಠ
ಹಠ
ಕುಳಿತ ಮರದ ಮಣ್ಣಿನಲ್ಲಿ
ಹಸಿರು ಭಾವ ಮಿಂಚಿದಂತಾಗಿ
ಮನವು ಅಗೆದು ತೆಗೆಯ ಬಯಸಿತು
ಬಿಸಿಲ ಝಳದಿ ಬರಡು
ಭಾವನೆಗಳ ಅಗೆತ
ಬಿಡದ ಛಲದಿ ಹಠಕ್ಕೆ
ನೇತು ಬಿದ್ದು
ತೂರಿ ತೂರಿ ಅಗೆದೆ
ಗುಂಡಿ ಆಳವಾಗಿ ಇಣುಕಿ
ಹಠವು ಮಣ್ಣಿನಲ್ಲಿ ಮಲಗಿ,
ನಕ್ಕು ನುಡಿಯಿತು
ಬರಡು ಬರಡು ಮಡಿಲಿನಲ್ಲಿ
ಸಿಗುವುದುಂಟೆ ಹಸಿರ ಪಸೆಯು
ಕಣ್ಣನೀರೆ ನಿನಗೆ ಬುತ್ತಿ
ಗಟ್ಟಿ ಮಾಡು ನಿನ್ನತನವ
ಎಂದು ಬತ್ತದಂತೆ
ನಿನ್ನ ಭಾವ ಸ್ಫೂರ್ತಿ.
ಬುಧವಾರ, ಅಕ್ಟೋಬರ್ 6, 2021
ಬಾಪುವಿನೊಂದಿಗೆ, ನನ್ನ ಕೆಲವು ಮನದಾಳದ ಮಾತುಗಳಿವೆ.
ನೀವೇನೋ ಸ್ವಾತಂತ್ರ್ಯಕ್ಕೆ ಹೋರಾಡಿ, ಸ್ವಾತಂತ್ರ್ಯದ ಬೀಜ ಬಿತ್ತು ಹೋದಿರಿ, ಆದರಿಂದು ಸ್ವಾತಂತ್ರ್ಯವೇ ಅರ್ಥ ಕಳೆದುಕೊಂಡು, ಕೆಲವು ವಿಷಯಗಳಿಗೆ ಹಾಗೂ ಕೆಲವರಿಗೆ ಮಾತ್ರ ಸೀಮಿತವಾಗಿದೆ.
ಅಹಿಂಸೆಯ ದಾರಿ ತೋರಿದಿರಿ, ಆದರೆ ನೀವು ಜನಗಳಿಗೆ ಮಾನಸಿಕವಾಗಿ ಹಿಂಸಿಸುವುದೂ ಮಹಾಪಾಪವೆಂದು ತೋರಿಸಿಕೊಡಲಿಲ್ಲ
ಮಾನವೀಯ ಮೌಲ್ಯಗಳಿರಬೇಕೆಂದೇನೂ ಹೇಳಿದಿರಿ, ಆದರಿಂದು ಜನಗಳಲ್ಲಿ ಪ್ರೀತಿ, ಕರುಣೆ, ತ್ಯಾಗ, ಅನುಕಂಪ, ಸಹಾನುಭೂತಿ, ತಾಳ್ಮೆಗಳೆಲ್ಲವೂ ಬುಡಸಮೇತ ಕಿತ್ತು ಬಿದ್ದುಕೊಂಡಿವೆ.
ಪ್ರಚಾರ, ಹೊಗಳಿಗೆ, ಅನ್ಯಾಯ, ಭ್ರಷ್ಟತೆ, ಮೋಸ, ವಂಚನೆಗಳಿಗೆ ಆಶ್ರಯ ನೀಡಿವೆ.
ನೀವೇ ಯೋಚಿಸಿ..... ನಿಮ್ಮ ಕನಸಿನ ದೇಶದ ವ್ಯವಸ್ಥೆಯು, ಸ್ವಲ್ಪ ಮಟ್ಟಿಗಾದರೂ ಸರಿಯಾಗಲು , ಜನ ಮನಗಳಲ್ಲಿ ನೀವು ಮತ್ತೆ ಮೊಳಕೆಯಾಗಿ ಚಿಗುರೊಡೆಯಬೇಕಾದ ಅನಿವಾರ್ಯತೆ ಎಷ್ಟಿದೆ ಎನ್ನುವುದನ್ನು ಬಾಪು.
ಕೆಲಸಬೇಕಾಗಿದೆ
ಕಸಗುಡಿಸುವ
ಕೆಲಸಬೇಕಾಗಿದೆ, ಆ ಕಚೇರಿಯಲಿ
ಆ ಒಲವ ನೋಡಲು
ಅದರ ಚೆಲುವ ಸವಿಯಲು
ಅಂತರ್ಯ ಸ್ವಚ್ಛವಾಗಲು
ಆ ಒಂದು ಕಚೇರಿಯಲಿ
ಒಲವಿಂದ ಉಸಿರಾಡುತ್ತಿರುವ
ಹಸಿರಿನ ಅರಿವನ್ನು
ನಾ ಉಸಿರಾಡಲು
ಕೆಲಸ ಬೇಕಾಗಿದೆ, ಆ ಕಚೇರಿಯಲಿ
ಒಲವು ಮೌನದಲಿ
ಪ್ರತಿಭಟಿಸುತ್ತಿರುವ
ಶಿಷ್ಟತೆಯ , ಮಾರ್ದನಿಯಾಗಿ
ಧ್ವನಿಸಲು ಕೆಲಸಬೇಕಾಗಿದೆ
ಆ ಕಚೇರಿಯಲಿ
ಒಲವಲ್ಲಿ ತುಂಬಿರುವ
ಗಾಂಭೀರ್ಯವನು ಅಳೆದು
ಕುಡಿದು ಹೊರಹೊಮ್ಮಿದ ಹೂವಾಗಲು
ಕೆಲಸಬೇಕಾಗಿದೆ, ಆ ಕಚೇರಿಯಲಿ
ಒಲವಿನ ಕಣ್ಣಲ್ಲಿ ಕಣ್ಣಾಗಿ
ಮಾತಲ್ಲಿ ಮಾತಾಗಿ
ಸುತ್ತಲಿನ ಸಾಂಗತ್ಯವಾಗಿ
ಅದರ ಚಪ್ಪಲಿಯ ಧೂಳಾಗಿ
ಅದರಂತೆ ಶಾಂತಿ ಸೌಹಾರ್ದದ
ಮೂರ್ತಿಯಾಗಲು
ಕೆಲಸಬೇಕಾಗಿದೆ, ಆ ಕಚೇರಿಯಲ್ಲಿ
ಕಸಗುಡಿಸುವ ಕೆಲಸಬೇಕಾಗಿದೆ.
ಅಮ್ಮ
ಪಾಪ ಅಮ್ಮ , ಎಂದು
ಅನ್ನಿಸಲೇ ಇಲ್ಲ
ಉರಿಮುಖದ ಸಹಾನುಮೂರ್ತಿಯ
ಒಳಗಿನ ಭಾವ ಎಂದೂ
ಅರಿಯಲೇ ಇಲ್ಲ, ಅರಿತ್ತದ್ದು ಒಂದೇ
ವಟ ವಟ ಎನ್ನುವ ಬೈಗುಳ
ರೋಗಕ್ಕೆ ನಂಟು ಬಿದ್ದು
ಬೆವರಲ್ಲೇ ಉಣ ಬಡಿಸಿದರೂ
ಕಂಡಿದ್ದು ನನ್ನ ಹಸಿವಷ್ಟೆ
ಮೊಳಕೆಯೊಡೆದ ಅದೆಷ್ಟೋ
ತನ್ನೊಳಗನ್ನು ಸಂಸಾರದ
ಕೆನ್ನಾಲಗೆಯಲ್ಲಿ ಅದ್ಹೇಗೆ
ಚಿವುಟಿರಬಹುದು?
ಸೊರಗಿ ಮೂಡಿದ ಸೀರೆಯ
ನೋವಿನ ನೆರಿಗೆಗಳನು
ಅಮ್ಮ, ಎಂದಿಗೂ ಬಿಚ್ಚಿ
ಹರಡಲಿಲ್ಲ
ನಕ್ಕು ಹರಡಿದರೂ ಅದ
ಅರಿಯುವ ಗೋಜು
ಯಾರಿಗಿರಲಿಲ್ಲ
ಒಮ್ಮೆ ಅಲ್ಲಿಂದ ಕಾಲ್ಕಿತ್ತರೆ
ಸಾಕೆನ್ನುತ್ತಿದ್ದ ಮನವಿಂದು
ಘಾಸಿಗೊಂಡು ಉರಿವ
ಅದೇ ಕರಿನೆರಳ
ಪಾಪ ಪ್ರಜ್ಞೆಯ ಭಾಸದಲಿ.
ಸ್ವಾತಂತ್ರ್ಯ
ನಿನಗೊಂದು ಸ್ವಇಚ್ಚೆಯ ಪ್ರಶ್ನೆ
ಉತ್ತರಿಸುವೆಯ ಅಪ್ಪಿ...
ಸ್ವಾತಂತ್ರ್ಯಕ್ಕೆ ರೆಕ್ಕೆ ಬರುವುದು
ಯಾವಾಗ...?
ಪ್ರತಿ ಮನೆ -ಮನಗಳು
ಮಸಣದಿಂದೆದ್ದು ಹೊರಬರುವುದು
ಯಾವಾಗ...?
ಕಳ್ಳಗಿಂಡಿಯಲ್ಲಿ ಸದಾ ಬಗ್ಗಿ ನೋಡುವ
ಸ್ವಾತಂತ್ರ್ಯ, ಮುಖಾಮುಖಿಯಾಗುವುದು
ಯಾವಾಗ..?
ತಳ್ಳುವಿಕೆ, ನೂಕುವಿಕೆಗೆ ನಾಚುವ ಸ್ವಾತಂತ್ರ್ಯ
ರಾರಾಜಿಸುವುದು ಯಾವಾಗ...?
ಹೆಣ್ಮಕ್ಕಳ ಹಣೆಯಗಲದ ಕುಂಕುಮದಲಿ
ಮಾತಾಗುವುದು ಯಾವಾಗ...?
ಹೆಂಗಳೆಯರ ಕಾಲ್ಗೆಜ್ಜೆಯಲಿ
ನಲಿದಾಡುವ ದನಿಯಾಗುವುದು
ಯಾವಾಗ...?
ಕಂಬಗಳಲಿ ಮುಗಿಲ್ನೋಡುತ
ಪಟ ಪಟನೆ ಕೈ ಬೀಸಿ ಕರೆಯುವ
ಬಾವುಟಕ್ಕೆ ಅರ್ಥದ ಗಾಳಿ
ಸ್ಪರ್ಶಿಸುವುದು ಯಾವಾಗ..?
ಸ್ವಾತಂತ್ರ್ಯಕ್ಕೂ ಸ್ವಾತಂತ್ರ್ಯ
ಮುತ್ತಿಕ್ಕುವುದು ಯಾವಾಗ..?
ನನ್ನ ದೇಶ, ಬಾಪು ಬಯಸಿದ
ಸ್ವಾತಂತ್ರ್ಯ ಕೊಡುವುದು ಯಾವಾಗ..?
ಉತ್ತರಿಸುವೆಯ ಅಪ್ಪಿ.....?
ತೂತು
ಬಚ್ಚಲ ತೂತು ದೊಡ್ಡದಾಯಿತೆಂದು
ಚಿಕ್ಕದು ಮಾಡಲು ಪ್ರಯತ್ನಿಸಿದೆ
ಮರುದಿನ ಅದರ ಸುತ್ತೆಲ್ಲಾ ಬಿರುಕುಗಳು
ಅದನ್ನೂ ಮುಚ್ಚಿ, ಉಸಿರು ಬಿಡುವಲ್ಲಿಗೆ
ಇಲಿರಾಯ ಒಂದು ಚಿಕ್ಕ
ಬಿಲ ಕೊರೆದು ಓಡಾಡಿದ
ಮಗನ ಬೆರಳು ಸಿಕ್ಕಿಕೊಂಡರೆಂದು
ಮಣ್ಣು ಹಾಕಿ ಸಮ ಮಾಡಿದೆ
ಕಣ್ಣು ಮುಚ್ಚಿ ಬಿಡುವುದರೊಳಗೆ
ಇರುವೆಗಳು ಸಾಲು ಸಾಲು
ಇದರ ಗೋಜೆ ಬೇಡೆಂದು
ಅಲ್ಲಿಗೊಂದು ಬೋರ್ಡು
ನೇತುಹಾಕಿದೆ
ಎಲ್ಲಾ ಕ್ರಿಮಿಗಳಿಗೂ
ಇಲ್ಲಿ ಸ್ಥಳಾವಕಾಶವಿದೆ
ಸವಾಲುಳ್ಳ ದೊಡ್ಡ ಕ್ರಿಮಿಗಳಿಗೆ
ಹೆಚ್ಚು ಪ್ರಾಶಸ್ತ್ಯ
ಹಾಗೂ ಸತ್ಕರಿಸುವಿಕೆಯೇ
ಉತ್ತರವಾಗಿರುವುದೆಂದು.
ಸೋಮವಾರ, ಸೆಪ್ಟೆಂಬರ್ 20, 2021
ಗ್ರಾಮೀಣ ಸಮುದಾಯ
"ಗ್ರಾಮೀಣ ಸಮುದಾಯ " ಎಷ್ಟೊಂದು ವಿಶಾಲ ಅರ್ಥಕೊಡುವ ಪದ. ಪದದಷ್ಟೇ ವಿಶಾಲ ಮನಸ್ಸಿನ, ಚಿಂತನಾಶೀಲ, ಪ್ರಜ್ಞಾವಂತ ಜನಗಳಿದ್ದರೆ ಸಮಸ್ಯೆಗಳು ಸುಲಭವಾಗಿ ಪರಿಹಾರ ಕಾಣುತ್ತವೆ.
ಎಲ್ಲಿ ಜನರ ಆಲೋಚನೆಗಳು, ಚಿಂತನೆಗಳು, ಕಾರ್ಯ ಚಟುವಟಿಗಳು, ಆಚಾರ, ವಿಚಾರಗಳು ಉನ್ನತ ಮಟ್ಟದಲ್ಲಿರುತ್ತವೆಯೋ , ಅಲ್ಲಿಯ ಶಾಲೆ, ಶಾಲೆಯ ವಾತಾವರಣವೂ ಸಹ ಉನ್ನತಮಟ್ಟದಲ್ಲಿರುತ್ತವೆ . ಒಂದು ಸಮುದಾಯ ಶಾಲೆಯ ಸಮಸ್ಯೆ /ಕೊರತೆಯನ್ನು ನೀಗಿಸುವಂತಿರಬೇಕೇ ಹೊರತು, ಹುಟ್ಟು ಹಾಕುವಂತಿರಬಾರದು.
ಶಾಲೆಗಳ ವಿಷಯದಲ್ಲಿ ಸಮುದಾಯಗಳ ಪಾತ್ರ ಮಹತ್ವದ್ದು, ಅದರ ಅರಿವು ಅಲ್ಲಿಯ ಜನಸಮುದಾಯಕ್ಕಿರಬೇಕು. ಇತ್ತೀಚಿನ ದಿನಗಳಲ್ಲಿ ವೈಯಕ್ತಿಕ ದ್ವೇಷ, ಒಳರಾಜಕೀಯ, ಒಳಸಂಚು, ಜಾತೀಯತೆ, ಸ್ವ ಪ್ರತಿಷ್ಠೆ ಗಳಿಗೆ ಶಾಲೆ ಒಳಗಾಗುತ್ತಿರುವುದು ಖಂಡಿಸಲಸಾದ್ಯವಾದ ಶೋಚನೀಯ ವಿಷಯ. ಎಲ್ಲಿ ಸಮುದಾಯದ ಜನ ಪ್ರಜ್ಞಾಹೀನರಾಗಿರುತ್ತಾರೋ, ಅಲ್ಲಿ ಅರಾಜಕತೆ ಹಾಗು ಮೂರ್ಖತನದ ಕಾರ್ಯಗಳು ಮೈತುಂಬಿ ಕುಣಿದಾಡುತ್ತವೆ.
ಸ್ವ ಪ್ರತಿಷ್ಠೆಗಳನ್ನು ಶಾಲೆಗಳಲ್ಲಿ ಬೇಯಿಸಿಕೊಳ್ಳಲು ಅವಕಾಶ ನೀಡುವ ಅಥವಾ ತಮ್ಮ ಮೂರ್ಖತನದ ಅಮಲಿನ ನಶೆಯನ್ನು ಶಾಲೆಯಲ್ಲಿ ಪ್ರದರ್ಶಿಸಲು, ಕೈ ಬೀಸಿ ಕರೆಯುವ ಮಟ್ಟಿಗೆ ಶಿಕ್ಷಕ ವರ್ಗವೂ ಬುದ್ಧಿಹೀನವಾಗಬಾರದು.
ಶಾಲೆ ವಿದ್ಯಾದೇಗುಲ. ಅದನ್ನು ವಿದ್ಯಾದೇಗುಲವಾಗಿಯೇ ನೋಡುವ ದೃಷ್ಟಿಯನ್ನು ಬೆಳೆಸಿಕೊಳ್ಳಬೇಕು.
ಜನರು, ಸಮುದಾಯ /ಶಾಲೆಯ ಹಿತಚಿಂತಕರಾಗಬೇಕೇ ವಿನಃ ಘಾತುಕರಾಗಬಾರದು.
ತಿಳಿದೋ, ತಿಳಿಯದೆಯೋ ಪ್ರೋತ್ಸಾಹಿಸುತ್ತಿರುವ ಪೋಷಕರು ಒಳಸಂಚುಗಳ ಬಗ್ಗೆ ಸ್ವಲ್ಪ ಚಿಂತಿಸಿದರೆ ಅದರಲ್ಲಿರುವ ಮರ್ಮಗಳು ಅರಿಯುತ್ತವೆ.
ಎಲ್ಲಕ್ಕಿಂತ ಹೆಚ್ಚಾಗಿ ಪೋಷಕರಲ್ಲಿ ಒಡೆದು ಮೂಡಬೇಕಾದ ಜ್ಞಾನೋದಯ.... ಇವೆಲ್ಲದುದರ ದುಷ್ಪರಿಣಾಮ ಯಾರ ಮೇಲೆ..?
ಮಂಗಳವಾರ, ಸೆಪ್ಟೆಂಬರ್ 14, 2021
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)
ನಾನು ಮಗು ನಿನ್ನ ಮಗು ನಿನ್ನ ಕುಂಬೆ ರೆಂಬೆ ಹಬ್ಬಿ ಮಗು ನಿನ್ನ ನೆನೆದು ಅಳುವ ಮಗು ನಿನ್ನ ಅಪ್ಪಿ ನಗುವ ಮಗು ನಿನ್ನ ನೋಡಿ ಕುಣಿವ ಮಗು ನಿನ್ನ ಹಸಿರ ಬನದಿ ಬೆಳೆವ ಉಸಿರ ಮ...
-
ನನ್ನನ್ನು ದೀರ್ಘವಾಗಿ ಓದಿಸಿದ ಪ್ರೀತಿಯ ಪುಸ್ತಕ ಕುವೆಂಪುರವರ "ಮಲೆಗಳಲ್ಲಿ ಮದುಮಗಳು " ಕಾದಂಬರಿ. 712 ಪುಟಗಳಿರುವ ಈ ಬೃಹತ್ ಕಾದಂಬರಿಯಲ್ಲಿ ಪಾತ್ರವ...
-
ಕ್ಷಮಿಸು ಎಂಬುದು ಆಗಾಗ್ಗೆ ಮರುಕಳಿಸುವ ಮಾರ್ದನಿ ನಮ್ಮ ಮನುಕುಲದೊಳಗೆ ಹಿಂಜರಿಕೆ, ಮುಗ್ಗರಿಕೆಗಳಿಲ್ಲ ಕ್ಷಮಿಸುವಿಕೆಯ ಅರಿವು ಪರಿವಿನ ಪಟ್ಟಿಯಲ್ಲಿ ಮುಲಾಜು ರಿಯಾಯಿತಿಗಳಿಲ...
-
ನೀ ಅಂದು ನಕ್ಕೆ.. ! ಗಾಣದಲ್ಲಿ ಸಿಕ್ಕಿದ ನಗು ಹೆಪ್ಪುಗಟ್ಟಿ ತಿರುಗಿತು ಗಾಣ ನಿಂತರೂ ಸವೆದ ದಾರಿಗಳು ಮಾಸಿಲ್ಲ ತಿರುಗುತ್ತಲೇ ಇವೆ ಒಳಗಿಳಿದ ಅದರ ಬೇರುಗಳು ನಾ ನಕ್ಕು ಚಿಗ...





















